ಜಯಕರ್ನಾಟಕ
From Wikipedia
ಜಯಕರ್ನಾಟಕ ಆಲೂರು ವೆಂಕಟರಾಯರು ೧೯೨೩ರಲ್ಲಿ ಧಾರವಾಡದಲ್ಲಿ ಪ್ರಾರಂಭಿಸಿದ ಮಾಸಪತ್ರಿಕೆ. ನಂತರ ವಾರಪತ್ರಿಕೆಯಾಗಿ ಪರಿವರ್ತನೆಗೊಂಡಿತು.
[ಬದಲಾಯಿಸಿ] ವೈಶಿಷ್ಟ್ಯತೆ
ಜಯಕರ್ನಾಟಕ ಪತ್ರಿಕೆ ಕರ್ನಾಟಕದ ಏಕೀಕರಣವನ್ನು ಮೌಲ್ಯವಾಗಿಟ್ಟುಕೊಂಡು ಆ ದಿಶೆಯಲ್ಲಿ ಶ್ರಮಿಸಿದ ಪತ್ರಿಕೆಯೆಂದು ಹೇಳಲಾಗುತ್ತದೆ. ಭಾಷೆ, ರಾಜಕೀಯ, ಸಾಹಿತ್ಯ, ರಾಷ್ಟ್ರಪ್ರೇಮ, ಇತಿಹಾಸ, ಸಾಮಾಜಿಕ ಮೌಲ್ಯಚಿಂತನೆ ಮತ್ತು ಜೀವನಕ್ರಮ ಪತ್ರಿಕೆಯಲ್ಲಿ ಸ್ಥಳ ಪಡೆದಿದ್ದವೆಂದು ಹೇಳಲಾಗುತ್ತದೆ.
ಆಂಗ್ಲ ಭಾಷೆಯಲ್ಲಿ ಕಾದಂಬರಿ, ಕತೆಗಳನ್ನು ರಚಿಸಿದ ರಾಜಾ ರಾವ್ ಜಯಕರ್ನಾಟಕ ಪತ್ರಿಕೆಗೆ ತಮ್ಮ ಮೊದಲ ನಾಲ್ಕು ಕನ್ನಡ ಲೇಖನಗಳನ್ನು ಬರೆದಿದ್ದರಂತೆ.
ಸುಮಾರು ನಲವತ್ತು ವರ್ಷಗಳ ಕಾಲ ಈ ಪತ್ರಿಕೆ ನಡೆಯಿತು.