ಎಸ್.ಕೆ.ಕರೀಂ ಖಾನ್
From Wikipedia
ಪರಿವಿಡಿ |
[ಬದಲಾಯಿಸಿ] ಹುಟ್ಟು
ಎಸ್.ಕೆ. ಕರೀಂ ಖಾನ್ ಸಕಲೇಶಪುರದಲ್ಲಿ ಜನಿಸಿದ್ದು ೧೯೦೮ ಎಪ್ರಿಲ್ ೧೨ರಂದು. ಅವರ ತಂದೆ ಅಬ್ದುಲ್ ರೆಹಮಾನ್ ಯಧರು ಮತ್ತು ಯುನಾನಿ ವೈದ್ಯರಾಗಿದ್ದರು. ಇವರ ಕುಟುಂಬದ ಪೂರ್ವಜರು ಅಫ್ಗಾನಿಸ್ತಾನದಿಂದ ಬಂದರು ಎಂದು ಹೇಳಲಾಗುತ್ತದೆ. ಇವರ ತಾಯಿಯ ಹೆಸರು ಜೈನಾಮಿ.
[ಬದಲಾಯಿಸಿ] ವಿದ್ಯಾಭ್ಯಾಸ
ಓದಿದ್ದು ೮ನೇ ತರಗತಿಯ ವರೆಗೆ ಮಾತ್ರ. ಅಚ್ಚಂಗಿ ನಾರಾಯಣ ಶಾಸ್ತ್ರಿ ಅವರ ಶಿಷ್ಯರಾಗಿದ್ದರು. ಕನ್ನಡ ಮತ್ತು ಸಂಸ್ಕೃತವನ್ನು ಕಲಿತರು.
[ಬದಲಾಯಿಸಿ] ಸ್ವಾತಂತ್ರ್ಯ ಹೋರಾಟದಲ್ಲಿ
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದರು. ಇವರಲ್ಲಿ ದೇಶಾಭಿಮಾನ ಮೂಡಿಸಲು ಇವರ ಗುರುಗಳಾದ ಅಚ್ಚಂಗಿ ನಾರಾಯಣ ಶಾಸ್ತ್ರಿ ಅವರೇ ಕಾರಣ. ಇವರು ಗಾಂಧಿವಾದಿಯಾಗಿದ್ದರು. ಆದ್ಧರಿಂದಲೇ ತಮ್ಮ ಕೊನೆಯ ದಿನಗಳ ವರೆಗೂ ಗಾಂಧಿ ಟೋಪಿಯನ್ನೇ ಹಾಕಿಕೊಳ್ಳುತ್ತಿದ್ದರು. ಮತ್ತು ಗಾಂಧೀ ತತ್ವಗಳನ್ನು ಪಾಲಿಸುತ್ತಿದ್ದರು.
[ಬದಲಾಯಿಸಿ] ಚಿತ್ರರಂಗ ಪ್ರವೇಶ
ಹೊಟ್ಟೆಪಾಡಿಗಾಗಿ ಚಿತ್ರರಂಗ ಪ್ರವೇಶಿಸಿದರು. ಭಕ್ತ ಕನಕದಾಸ ಚಿತ್ರದಲ್ಲಿ ಸಾಹಿತ್ಯದಲ್ಲಿ ಸಹಾಯಕರಾಗಿ ದುಡಿದರು. ಸಂಗೀತ ನಿರ್ವಹಣೆಯಲ್ಲೂ ಮಹತ್ತರದ ಪಾತ್ರ ವಹಿಸಿದ್ದರು. ಡಿ. ಆರ್. ನಾಯ್ಡು ಅವರ ಸ್ವರ್ಣಗೌರಿ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದರು. ಗಂಗೆ ಗೌರಿ, ಶಿವಲಿಂಗ ಸಾಕ್ಷಿ, ಜೀವನ ತರಂಗ , ಬೇವು ಬೆಲ್ಲ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಣೆ ರಚಿಸಿದರು. ಆದರೆ ಇವರಿಗೆ ಚಿತ್ರರಂಗದಲ್ಲಿ ಕರಾಳ ಅನಾಯಿತು.
[ಬದಲಾಯಿಸಿ] ಜಾನಪದ ಕ್ಷೇತ್ರದಲ್ಲಿ
[ಬದಲಾಯಿಸಿ] ಮನೆ
ಕರೀಂ ಖಾನ್ ಅವರು ಕೊನೆಯ ವರೆಗೂ ಬ್ರಹ್ಮಚಾರಿಯಾಗಿಯೇ ಇದ್ದರು. ತಮಗೆ ತಾವು ಏನನ್ನೂ ಮಾಡಿಕೊಂಡಿರಲಿಲ್ಲ. ಇರಲು ಒಂದು ಸ್ವಂತ ಮನೆ ಇರಲಿಲ್ಲ. ಒಂದರ ಹಿಂದೆ ಬಂದ ಸರ್ಕಾರದ ರಾಜಕಾರಣಿಗಳೆಲ್ಲಾ ಬರೀ ಫೋಟೋ ತೆಗಿಸಿಕೊಳ್ಳಲು ಬರುತ್ತಿದ್ದರು, ಹಾಗು ಸನ್ಮಾನ ಮಾಡುತ್ತಿದ್ದರು. ಆದರೆ ಕೊಟ್ಟ ಮಾತಿನಂತೆ ಅವರಿಗೆ ಮನೆಯನ್ನು ಕಲ್ಪಿಸಿಕೊಡಲಿಲ್ಲ.
[ಬದಲಾಯಿಸಿ] ಕೊನೆಯ ದಿನಗಳು
ಕೊನೆಯ ದಿನಗಳಲ್ಲಿ ಅವರನ್ನು ಅತಿಯಾದ ಖಾಯಿಲೆ ಕಾಡಿತು. ಇರಲು ಸ್ವಂತ ಮನೆ ಇರಲಿಲ್ಲ. ಸಂಬಂಧಿಗಳೇ ಅವರನ್ನು ನೋಡಿಕೊಳ್ಳುತ್ತಿದ್ದರು. ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರೂ, ಚಿತ್ರರಂಗದ ಜನ ಇವರತ್ತ ಸುಳಿಯಲಿಲ್ಲ. ಇವರು ಜುಲೈ ೨೯ ೨೦೦೬ರಂದು ಕೊನೆಯುಸಿರೆಳೆದರು.