ಸಮೇತನಹಳ್ಳಿ ರಾಮರಾವ್

From Wikipedia

ಸಮೇತನಹಳ್ಳಿ ರಾಮರಾಯರು ೧೯೧೭ ನವಂಬರ ೨೪ರಂದು ಬೆಂಗಳೂರು ಜಿಲ್ಲೆಯ ಸಮೇತನಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ರುಕ್ಮಿಣಿಯಮ್ಮ; ತಂದೆ ಶ್ರೀನಿವಾಸರಾವ. ಬಡತನದಲ್ಲಿ ಕಷ್ಟಪಟ್ಟು ಶಿಕ್ಷಣ ಪೂರೈಸಿದ ಇವರು ಆರೋಗ್ಯ ನಿರೀಕ್ಷಕರೆಂದು ನಿವೃತ್ತರಾದರು.

ಇವರ ಕೃತಿಗಳು:

  • ಎಲೆಮರೆಯ ಹೂ
  • ಕಲಾರಾಧನೆ
  • ಜೂಲಿಯಸ್ ಸೀಜರ್
  • ತಲಕಾಡುಗೊಂಡ
  • ನಾಟ್ಯಮಂದಾರ
  • ಪ್ರಾಣವೀಣೆ
  • ಮಹಾಶ್ವೇತೆ
  • ಯದುವೊಡೆಯ
  • ರಾಸಲೀಲೆ
  • ಶಾಕುಂತಲ (ಕಾವ್ಯ)
  • ಶಿಲ್ಪ ಸಂಗೀತ
  • ಸವತಿಗಂಧ ವಾರಣಿ
  • ಸಿರಿಯಲ ದೇವಿ
  • ಸ್ವರ್ಗ ಸೋಪಾನ

[ಬದಲಾಯಿಸಿ] ಪುರಸ್ಕಾರ

  • ‘ಶಾಕುಂತಲ’ (ಕಾವ್ಯ)ಕ್ಕೆ ೧೯೭೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.
  • ‘ಸ್ವರ್ಗ ಸೋಪಾನ’, ‘ತಲಕಾಡುಗೊಂಡ’ ಕೃತಿಗಳಿಗೆ ರಾಜ್ಯ ಸರಕಾರದ ಬಹುಮಾನ ಲಭಿಸಿದೆ.
  • ‘ಸಿರಿಯಲ ದೇವಿ’ ಕೃತಿಗೆ ಸಂಯುಕ್ತ ಕರ್ನಾಟಕ ಕಾದಂಬರಿ ಸ್ಪರ್ಧೆ ಬಹುಮಾನ ದೊರೆತಿದೆ.
  • ‘ಶಿಲ್ಪ ಸಂಗೀತ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ದೊರೆತಿದೆ.