ಶ್ರೀ ಮಧ್ವಾಚಾರ್ಯರು

From Wikipedia

ಶ್ರೀ ಮಧ್ವಾಚಾರ್ಯರು
ಹುಟ್ಟಿದ ದಿನಾಂಕ : ೧೨೩೮-೧೩೧೭
ಹುಟ್ಟಿದೂರು : ಪಾಜಕ, ಉಡುಪಿ
ತಂದೆ: ಮಧ್ಯಗೇಹ ಭಟ್ಟ
ತಾಯಿ: ವೇದವತಿ
ಗುರು: ಅಚ್ಯತ ಪ್ರೇಕ್ಷಕ
ಹೆಸರುಗಳು:

(೧) ವಾಸುದೇವ, ತಂದೆ ತಾಯಿ ಇಟ್ಟ ಹೆಸರು
(೨) ಶ್ರೀ ಮಧ್ವಾಚಾರ್ಯರು,
ಸನ್ಯಾಸ ಪಡೆದನಂತರದ ಹೆಸರು
(೩) ಪೂರ್ಣಪ್ರಜ್ಙ,
ಪರಿಪೂರ್ಣನಾದ ಬ್ರಹ್ಮನನ್ನು ತಿಳಿದವನು
(೪) ಆನಂದತೀರ್ಥ,
ಆನಂದವುಂಟಮಾಡುವ ಉಪದೇಶಗಳನ್ನು ಮಾಡುವವರು

ಹಿಂದಿನ ಅವತಾರಗಳು
(ನಂಬಿಕೆಯಂತೆ):

(೧) ಹನುಮ
(೨) ಭೀಮ

ಶ್ರೀ ಮಧ್ವಾಚಾರ್ಯರು (೧೨೩೮-೧೩೧೭)ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಙಾನಿಗಳು

ಪರಿವಿಡಿ

[ಬದಲಾಯಿಸಿ] ಬಾಲ್ಯ

ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತ ವೇದಾಭ್ಯಾಸಗಳನ್ನೆರಡನ್ನು ಮುಗಿಸಿ ಗುರು ಅಚ್ಯತ ಪ್ರೇಕ್ಷಕರಿಂದ ಸನ್ಯಾಸವನ್ನು ಪಡೆದು ಶ್ರೀ ಮಧ್ವಾಚಾರ್ಯರೆಂಬ ಹೆಸರು ಪಡೆದರು.

[ಬದಲಾಯಿಸಿ] ಪ್ರಚಾರ

ಭಾರತದಲ್ಲೆಡೆ ದ್ವೈತಮತವನ್ನು ಪ್ರಚಾರಿಸಿದರು. ಮಧ್ವಾಚಾರ್ಯರು ಎಂಟು ಮಠಗಳು ಮತ್ತು ಉಡುಪಿಯ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದರು.

[ಬದಲಾಯಿಸಿ] ಕೃತಿಗಳು

ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವುಗಳಲ್ಲಿ ಮುಖ್ಯವಾದುದು:

  • ಬ್ರಹ್ಮಸೂತ್ರ ಭಾಷ್ಯ
  • ಅಣಯವ್ಯಾಖ್ಯಾನ
  • ಗೀತಾಭಾಷ್ಯ
  • ಉಪನಿಷತ್‌ಭಾಷ್ಯ
  • ಮಹಾಭಾರತ ತಾತ್ಪರ್ಯ ನಿರ್ಣಯ

[ಬದಲಾಯಿಸಿ] ಈ ಲೇಖನಗಳನ್ನೂ ನೋಡಿ

[ಬದಲಾಯಿಸಿ] ಹೊರಗಿನ ಸಂಪರ್ಕಗಳು