ಪ್ರೊ ಹಿರಿಯಣ್ಣನವರು

From Wikipedia

ಪರಿವಿಡಿ

[ಬದಲಾಯಿಸಿ] ಪ್ರೊ. ಶ್ರೀ. ಎಮ್. ಹಿರಿಯಣ್ಣನವರು. (೧೮೭೧-೧೯೫೦)

ಆಂಗ್ಲಭಾಷೆಯಲ್ಲಿ ಭಾರತೀಯತತ್ವಶಾಸ್ತ್ರದ ಬಗ್ಗೆ ಸಮರ್ಥವಾಗಿ, ವಿದ್ವತ್ಪೂರ್ಣವಾಗಿ ಬರೆದ ಪುಸ್ತಕಗಳಸಾಲಿನಲ್ಲಿ ಹಿರಿಯಣ್ಣನವರ ಗ್ರಂಥ ಎದ್ದು ಕಾಣುವುದು, ಎಲ್ಲರ ಗಮನಕ್ಕೆ ಬಂದಿರುವ ವಿಷಯವಾಗಿದೆ. ಅವರ ಪುಸ್ತಕ, ಇಂದಿಗೂ ವಿಶ್ವದ ಭಾರತೀಯತತ್ವಶಾಸ್ತ್ರದ ವಿದ್ಯಾರ್ಥಿಗಳಿಗೆ, ಪಠ್ಯ ಪುಸ್ತಕವಾಗಿದೆ. ಪ್ರೊ. ಹಿರಿಯಣ್ಣನವರು ಸಂಸ್ಕೃತದಲ್ಲಿ ಪ್ರಕಾಂಡ ಅಂಡಿತರು. ಹಾಗೆಯೇ ಆಂಗ್ಲಭಾಷೆಯಲ್ಲೂ ಪ್ರಚಂಡ ಪ್ರಭುತ್ವವನ್ನು ಸಂಪಾದಿಸಿದವರು. ಅವರ ಇಂಗ್ಲೀಷ್ ವ್ಯಾಖ್ಯಾನ, ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಅವರು ಅತ್ಯಂತ ಮೃದುಮಧುರಭಾಷಿ, ಹಾಗೂ ಸಮರ್ಥ ಚಿಂತಕರು. ಭಾರತೀಯ ತತ್ವಶಾಸ್ತ್ರವನ್ನು ಸರಿಯಾಗಿ ಅರ್ಥೈಸಿ ಹೇಳುವುದರಲ್ಲಿ ಎತ್ತಿದ ಕೈ. ತಮ್ಮ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿ-ವಿಶ್ವಾಸಳಿಂದ ಕಾಣುತ್ತಿದ್ದರು.

[ಬದಲಾಯಿಸಿ] ಜನನ ಬಾಲ್ಯ ಮತ್ತು ಮನೆಯ ಪರಿಸರ

ಹಿರಿಯಣ್ಣನವರು ಮೇ, ೭, ೧೮೭೧ ರಲ್ಲಿ ಜನಿಸಿದರು. ತಂದೆ. ಶ್ರೀ ನಂಜುಂಡಯ್ಯನವರು. ಅವರಿಗೆ ೩ ಗಂಡುಮಕ್ಕಳು. ಅವರಲ್ಲಿ ಹಿರಿಯಣ್ಣನವರು ಎರಡನೆಯವರು. ಇವರ ಒಬ್ಬ ಸೋದರ, ಪ್ರಖ್ಯಾತ ಶ್ರೀ. ಎಮ್. ಎನ್. ಕೃಷ್ಟರಾಯರು. ಇವರು ಹಿಂದಿನ ಮೈಸೂರು ಸಂಸ್ಥಾನದ ಸರ್ಕಾರಿ ಹುದ್ದೆಯಲ್ಲಿ ಹಲವಾರು ಶಾಖೆಗಳಲ್ಲಿ ದುಡಿದು, ಕೊನೆಗೆ, ದಿವಾನರಾಗಿ ನಿವೃತ್ತರಾದವರು. ಇವರ ಹೆಸರಿನಲ್ಲೇ, ಬೆಂಗಳೂರಿನ ಬಸವನಗುಡಿ ಬಡಾವಣೆಯಲ್ಲಿ, ವಿಶಾಲವಾದ, (ಕೃಷ್ಣರಾವ್ ಪಾರ್ಕ್) ಉದ್ಯಾನವನವಿದೆ. ಹಿರಿಯಣ್ಣನವರ ಪೂರ್ವಜರು ಮತ್ತು ತಂದೆತಾಯಿಗಳು, ಮೈಸೂರಿನಲ್ಲೇ ತಮ್ಮ ಜೀವಿತದ ಎಲ್ಲಾ ಸ್ತರಗಳನ್ನೂ ಕಳೆದರು. ಹಿರಿಯಣ್ಣನವರೂ ಅಷ್ಟೆ. ಅಗಿನಕಾಲದಲ್ಲಿ ಸ್ತಿತಿವಂತರಾಗಿದ್ದ ನಂಜುಂಡಯ್ಯನವರು, ತಮ್ಮ ೩ ಮಕ್ಕಳನ್ನೂ ಮೈಸೂರಿನ 'ಸದ್ವಿದ್ಯಶಾಲೆ,' ಯಲ್ಲಿ ಓದಿಸಿದರು. ಈ ಸಂಸ್ಕೃತ ಶಾಲೆಯನ್ನು, ಪೆರಿಯಸ್ವಾಮಿ ತಿರುಮಲಾಚಾರ್ಯರು ನಡೆಸುತ್ತಿದ್ದರು.


೧೮೯೦ ರ ಹೊತ್ತಿಗೆ ವಿದ್ಯಾಭ್ಯಾಸ ಮುಗಿಯಿತು. ೧೮೯೩ ರಲ್ಲಿ, 'ಮೈಸೂರಿನಲ್ಲೇ ನಾರ್ಮಲ್.' ಸ್ಕೂಲಿನಲ್ಲಿ ಉಪಾದ್ಯಾಯ ವೃತ್ತಿ ಸಿಕ್ಕಿತು. ಇದು ಕನ್ನಡ ಉಪಾಧ್ಯಾಯರಿಗೆ ಶಿಕ್ಷಣ ಕೊಡುವ ಸಂಸ್ಥೆಯಾಗಿತ್ತು. ಇಲ್ಲಿ ಹಿರಿಯಣ್ಣನವರು ಸುಮಾರು ೧೧ ವರ್ಷ ಸೇವೆಸಲ್ಲಿಸಿದರು. ೧೮೯೯ ರಲ್ಲಿ ಮಹಾರಾಜ ಕಾಲೇಜ್ ನಲ್ಲಿ, ಬಿ. ಎ. ಪದವಿಯನ್ನು ಪ್ರಾರಂಭಮಾಡಿ, ಮೊದಲ ಪ್ರಥಮ ದರ್ಜೆ ಕಾಲೇಜಾಯಿತು. ೧೯೦೭ ರಲ್ಲಿ ಮುಖ್ಯೋಪಾದ್ಯರಾದರು. ಮೈಸೂರಿನ ಓರಿಯೆಂಟಲ್ ಲೈಬ್ರರಿಯಲ್ಲಿ ಗ್ರಂಥ ಪಾಲಕರಾಗಿ ಕೆಲಸಮಾಡಿದರು. ಅವರು ಪಾದಾರ್ಪಣೆ ಮಾಡಿದಾಗ ಅಲ್ಲಿದ್ದ ಒಟ್ಟು ಪುಸ್ತಕಗಳು, ಸುಮಾರು, ೩,೦೦೦. ಅದರಲ್ಲಿ ಸುಮಾರು ೧,೬೫೩ ಪುಸ್ತಕಗಳು ಅಚ್ಚಾಗಿದ್ದವು. ೧,೩೫೮ ಕೈಬರಹದ ತಾಳೆಗರಿ ಲೇಖನದ ಪುಸ್ತಕಗಳು.

ಆ ಕೆಲಸದಲ್ಲಿ ಸಿಕ್ಕುತ್ತಿದ್ದ ಹಣದಲ್ಲಿ ತಮ್ಮ ಪರಿವಾರದ ಆವಶ್ಯಕತೆಗಳನ್ನು ಪೂರೈಸುವುದು ಕಷ್ಟವಾದ್ದರಿಂದ ಅವರು ಬೆಂಗಳೂರಿಗೆ ಹೋಗಿ ಅಲ್ಲಿ ಕಾರಕೂನರಾಗಿ ಕೆಲಸಮಾಡಿದರು. ಆ ಕೆಲಸದಲ್ಲಿ ಅವರಿಗೆ ತೃಪ್ತಿ ದೊರೆಯಲಿಲ್ಲ. ೧೯೧೨ ರಲ್ಲಿ ವಿಶ್ವವಿದ್ಯಾಲಯದಿಂದ ಅವರಿಗೆ ಕೆಲಸಕ್ಕೆ ಆಹ್ವಾನ ಬಂತು. ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ೧೯೧೭ ರಲ್ಲಿ ಸಂಸ್ಕೃತ ಪ್ರೊಫೆಸರ್ ಆದರು. ಪ್ರೊಫೆಸರ್ ಹುದ್ದೆಗೆ ಎಲ್.ಟಿ ; ಪದವಿಯ ಅಗತ್ಯವಿತ್ತು ; ಅದಕ್ಕಾಗಿ ಅವರನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಲಿಯವರೇ ತೀರ್ಮಾನಿಸಿ ಕಳಿಸಿಕೊಟ್ಟರು ಪಾಶ್ಚಿಮಾತ್ಯದೇಶಗಳ ತತ್ವ ಶಾಸ್ತ್ರದ ಬಗ್ಗೆ ಪಾಠಹೇಳಲು ಹಲವಾರು ಜನ ಸಿದ್ಧರಿದ್ದರು. ಆದರೆ ಭಾರತೀಯ ತತ್ವಶಾಸ್ತ್ರದ ಬಗ್ಗೆ ತಿಳಿದವ್ಯಕ್ತಿಗಳು ಬಹಳ ಅಲ್ಪ.]

[ಬದಲಾಯಿಸಿ] ಹಿರಿಯಣ್ಣನವರ ಉಡುಪು

ಕಚ್ಚೆಪಂಚೆ, ಕೆನೆಬಣ್ಣದ ನಿಲುವಂಗಿ, ಸರಿಗೆ ಇಲ್ಲದ ರುಮಾಲು. ಪೂನಾ ಜೋಡು. ಉಡುತ್ತಿದ್ದ ಪೋಷಾಕಿನಲ್ಲಿ ಸ್ವಲ್ಪವೂ ಕರೆಯಿರಕೂಡದು. ಎಲ್ಲದರಲ್ಲೂ ಅಚ್ಚುಕಟ್ಟು ಮತ್ತು ಸರಳತೆ ಎದ್ದು ಕಾಣುತ್ತಿತ್ತು. ಅಧಿಕಾರ, ಪದವಿ, ಹಣ ಎಂದೂ ಹಿರಿಯಣ್ಣನವರಿಗೆ ಬೇಕಿರಲಿಲ್ಲ.

[ಬದಲಾಯಿಸಿ] ಹುದ್ದೆಗಳು

ಆದರೆ ೧೯೧೮ ರಲ್ಲಿ ವಿಶ್ವವಿದ್ಯಾಲಯ ಆರಿಸಿದ್ದು, ಪ್ರೊ. ಸರ್ವಪಲ್ಲಿ ರಾಧಾಕೃಷ್ಣನ್ ರನ್ನು. [೧೮೮೮-೧೯೭೫] ಮುಂದೆ, ರಾಧಾಕೃಷ್ಣನ್ ರವರು 'ಆಕ್ಸ್ ಫರ್ಡ್,' ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆದರು. ಆದರೂ ಹಿರಿಯಣ್ಣನವರೂ, ಮತ್ತು ಅವರ ಸಹೋದ್ಯೋಗಿ ಶ್ರೀ ವಾಡಿಯಾರವರು ಎಂದಿನಂತೆ, ತಮ್ಮ ಕೆಲಸವನ್ನು ಮಾಡುತ್ತಿದ್ದರು. ೧೯೨೭ ರಲ್ಲಿ ಅವರಿಗೆ ತಮ್ಮ ವೃತ್ತಿಯಲ್ಲಿ ಸ್ವಲ್ಪ ಅಸಮಧಾನ ತಲೆದೋರಿತು. ಸ್ವ ಇಚ್ಛೆಯಿಂದ ತಾವಾಗಿಯೇ ನಿವೃತ್ತರಾದರು.

ಇವರು ನಿವೃತ್ತರಾದ ಮೇಲೆ ಅನೇಕ ಸಂಸ್ಥೆಗಳು ಅವರನ್ನು ಕರೆದರು. ಆದರೆ ಅವರು ಹೋಗಲಿಲ್ಲ. ಒಬ್ಬಮಗಳಿಗೆ ಮದುವೆಮಾಡಿದರು. ಅವರು ಮೈಸೂರಿನಲ್ಲೇ ನೆಲಸಿದರು. ಹಿರಿಯಣ್ಣನವರ ನಿಧನದ ನಂತರ ಅವರ ಕೆಲವು ಪುಸ್ತಕಗಳು ಪ್ರಕಟಿಸಲ್ಪಟ್ಟವು.


[ಬದಲಾಯಿಸಿ] ಕೃತಿಗಳು :

  • ೧. Kenopanishad -೧೯೧೨
  • ೨. "ಭಾರತೀಯ ತತ್ವಶಾಸ್ತ್ರದ ರೂಪುರೇಖೆ." -೧೯೩೨.
  • ೩. ಭಾರತೀಯ ತತ್ವಶಾಸ್ತ್ರದ ಸಾರ. -೧೯೪೯
  • ೪. Art experience. (೧೦ ಪ್ರಬಂಧಗಳಿವೆ) -೧೯೫೪
  • ೫. Popular Essays in Indian Philosophy. -೧೯೫೨
  • ೬. Indian Philosophical Studies. -೧೯೫೭-೧೯೭೨
  • ೭. Kenopanishad, Text in Devanagari,with Roman Characters. -೧೯೭೪
  • ೮. Isavasyopanishad, Text in Devanagari, in Roman Characters -with the Commentary of ShrI. ShrI. Shankaracharya.



[ಬದಲಾಯಿಸಿ] ಪ್ರಶಸ್ತಿಗಳು :

೧. ೧೯೩೮ ರಲ್ಲಿ, ಮದ್ರಾಸ್ ಸರ್ಕಾರ, 'ಸಂಸ್ಕೃತ ಅಕ್ಯಾಡಮಿ,' ಎಂಬ ವಿದ್ಯಾಸಂಸ್ಥೆ ಹಿರಿಯಣ್ಣನವರಿಗೆ "ಸಂಸ್ಕೃತ ಸೇವಾಧುರೀಣ," ಎಂಬ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದರು. ಹಿರಿಯಣ್ಣನವರಿಗೆ ಇಷ್ಟವಿರಲಿಲ್ಲದಿದ್ದರೂ ಅಧಿಕಾರಿಗಳ ಒತ್ತಾಯಕ್ಕೆ ಮಣಿಯಲೇಬೇಕಾಗಿಬಂತು.


[ಬದಲಾಯಿಸಿ] ಅನುಸರಣಿಕೆಗಳು

-ಡಾ. ಎಲ್. ಎಸ್. ಶೇಷಗಿರಿರಾಯರ ಕಿರು ಕೈಪಿಡಿ. ೧೯೭೬ ರಲ್ಲಿ, "ಭಾರತ ಭಾರತಿ ಪ್ರಕಾಶನ, " ಸಂಸ್ಥೆಯಿಂದ ಪ್ರಕಾಶಿತ ಕಿರುಕೈಪಿಡಿಗಳು. ಬೆಂಗಳೂರು- ೧೯.