ಮೋಹನ ನಾಗಮ್ಮನವರ

From Wikipedia

ಮೋಹನ ನಾಗಮ್ಮನವರ ೧೯೬೩ ಅಕ್ಟೋಬರ ೭ರಂದು ಜನಿಸಿದರು. ಕರ್ನಾಟಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೆ ಗೋಕಾಕ ಚಳವಳಿ, ದಲಿತ ಚಳವಳಿ ಇತ್ಯಾದಿಗಳಲ್ಲಿ ಪಾತ್ರ. ೧೯೮೪ರಲ್ಲಿ ಕನ್ನಡಮ್ಮ ದಿನಪತ್ರಿಕೆಯಲ್ಲಿ ಕೆಲಸ. ಕೆಲ ಕಾಲ ಲಂಕೇಶ್ ಪತ್ರಿಕೆಯ ಬರಹಗಾರರಾಗಿದ್ದರು. ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘ‍ದ ಆಜೀವ ಸದಸ್ಯರು. ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿದ ಚಳವಳಿಯ ಸಮಯದಲ್ಲಿ ಕೆಲಕಾಲ ಬಳ್ಳಾರಿ‍ಯಲ್ಲಿ ಜೈಲುವಾಸ ಅನುಭವಿಸಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ವಿಧಾನಸೌಧ
  • ಅಗ್ರಹಾರದ ಒಂದು ಸಂಜೆ
  • ಮಹಾನಿರ್ಗಮನ

[ಬದಲಾಯಿಸಿ] ಕಥಾ ಸಂಕಲನ

  • ಚಿಂತಾಮಣಿ
  • ಸಂಕಟಪುರದ ನಾಟಕ ಪ್ರಸಂಗ

[ಬದಲಾಯಿಸಿ] ಲೇಖನಗಳು

  • ಬೆಡಗಿನೆದುರಿನ ಬೆರಗು
  • ಕಥನ ಕುತೂಹಲ
  • ಬಯಲ ಬೇರ ಚಿಗುರು
  • ಸ್ವಾತಂತ್ರ್ಯ ಆಂದೋಲನದ ಪ್ರಮುಖ ಧಾರೆಗಳು

[ಬದಲಾಯಿಸಿ] ಸಂಪಾದನೆ

  • ಸ್ವಾತಂತ್ರ್ಯ ಚಿಂತನೆ

[ಬದಲಾಯಿಸಿ] ಪ್ರಶಸ್ತಿ

  • ಅಗ್ರಹಾರದ ಒಂದು ಸಂಜೆ ಕವನಸಂಕಲನದ ಹಸ್ತಪ್ರತಿಗೆ ೧೯೯೪ರ ಮುದ್ದಣ ಕಾವ್ಯ ಪ್ರಶಸ್ತಿ, ಪ್ರಕಟಿತ ಕೃತಿಗೆ ೧೯೯೬ರ ಆರ್ಯಭಟ ಪ್ರಶಸ್ತಿ, ೧೯೯೬ರ ಸಾಹಿತ್ಯ ಪರಿಷತ್ತಿನ ರತ್ನಾಕರ ವರ್ಣಿ - ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಲಭಿಸಿವೆ.
  • ಸಂಕಟಪುರದ ನಾಟಕ ಪ್ರಸಂಗ ಕಥಾಸಂಕಲನಕ್ಕೆ ವಾರಂಬಳ್ಳಿ ಪ್ರತಿಷ್ಠಾನದ ೨೦೦೦ನೆಯ ಸಾಲಿನ ಕಥಾ ಪ್ರಶಸ್ತಿ
  • ಸಾಹಿತ್ಯ ಪತ್ರಿಕೋದ್ಯಮದ ಸೇವೆಗೆ ಕರ್ನಾಟಕ ಸರಕಾರವು ೧೯೯೭ರ ಡಾ| ಅಂಬೇಡಕರ ಜಯಂತಿ ಸಂದರ್ಭದಲ್ಲಿ ಸನ್ಮಾನಿಸಿದೆ.
  • ೨೦೦೩ರಲ್ಲಿ ಸಾಹಿತ್ಯ, ಸಂಘಟನೆಗಾಗಿ ಬೆಂಗಳೂರಿನ ರಂಗಚೇತನ ಸಂಸ್ಥೆ ನಾಡಚೇತನ ಪ್ರಶಸ್ತಿ ನೀಡಿದೆ.