ಆರ್.ನಾಗೇಂದ್ರರಾವ್
From Wikipedia
ಆರ್. ನಾಗೇಂದ್ರರಾಯರು ಕನ್ನಡ ಚಿತ್ರರಂಗದ ಆರಂಭಿಕ ವರ್ಷಗಳಲ್ಲಿನ ಹೆಸರಾಂತ ನಿರ್ದೇಶಕರು, ನಿರ್ಮಾಪಕರೊಲ್ಲಬ್ಬರು. 'ಆರ್.ಎನ್.ಆರ್. ಪಿಕ್ಚರ್ಸ್ ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿ, ಹಲವಾರು ಯಶಸ್ವಿ ಕನ್ನಡ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಇವುಗಳಲ್ಲಿ ಮಹಾತ್ಮ ಕಬೀರ್, ವಿಜಯನಗರದ ವೀರಪುತ್ರ ಹಾಗು ನಮ್ಮ ಮಕ್ಕಳು ಚಿತ್ರಗಳು ಪ್ರಮುಖವಾದವುಗಳು.
ಕನ್ನಡ ಚಿತ್ರರಂಗದ ಭೀಷ್ಮಾಚಾರ್ಯರೆಂದೇ ಪ್ರಸಿದ್ಧರಾಗಿದ್ದ ನಾಗೇಂದ್ರರಾಯರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ.ತಂದೆ ರಟ್ಟೆಹಳ್ಳಿ ಕೃಷ್ಣರಾವ್.ತಾಯಿ ರುಕ್ಮಿಣೀದೇವಿ.ವೃತ್ತಿ ರಂಗಭೂಮಿಯಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ ಆರೆನ್ನಾರ್ ಪ್ರಸಿದ್ಧರಾಗಿದ್ದು ಸೀತೆ,ಚಂದ್ರಮತಿ,ಶಕುಂತಲೆ ಪಾತ್ರಗಳಿಂದ.ಕನ್ನಡ ಚಲನಚಿತ್ರಗಳಲ್ಲಿ ಪೋಷಕನಟ,ನಾಯಕನಟ,ಖಳನಟನಾಗಿ ವೈವಿಧ್ಯಮಯ ಹಾಗೂ ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿದ್ದಾರೆ.
೧೯೬೯ರಲ್ಲಿ ಬಿಡುಗಡೆಯಾದ ನಮ್ಮ ಮಕ್ಕಳು ಚಿತ್ರ ರಾಷ್ಟ್ರ ಪ್ರಶಸ್ತಿಯಿಂದ ಪುರಸ್ಕಾರವಾಯಿತು.೧೯೬೮ರಲ್ಲಿ ಬಿಡುಗಡೆಯಾಗಿದ್ದ ಹಣ್ಣೆಲೆ ಚಿಗುರಿದಾಗ ಚಿತ್ರದ ಉತ್ತಮ ಅಭಿನಯಕ್ಕಾಗಿ ಆರ್. ನಾಗೇಂದ್ರರಾಯರಿಗೆ ಶ್ರೇಷ್ಟ ನಾಯಕನಟ ಪ್ರಶಸ್ತಿ ದೊರಕಿತ್ತು.
ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ ಆರ್.ಎನ್. ಜಯಗೋಪಾಲ್, ಹೆಸರಾಂತ ನಟರೊಲ್ಲಬ್ಬರಾದ ಆರ್.ಎನ್.ಸುದರ್ಶನ್ ಹಾಗೂ ಛಾಯಾಗ್ರಾಹಕ ಆರ್.ಎನ್.ಕೃಷ್ಣಪ್ರಸಾದ್ ಅವರು ಆರ್.ನಾಗೇಂದ್ರರಾಯರ ಪುತ್ರರು.
[ಬದಲಾಯಿಸಿ] ಆರ್.ನಾಗೇಂದ್ರರಾಯರ ನಿರ್ದೇಶನದ ಚಿತ್ರಗಳು
ವರ್ಷ | ಚಿತ್ರ |
---|---|
೧೯೪೩ | ಸತ್ಯ ಹರಿಶ್ಚಂದ್ರ |
೧೯೪೭ | ಮಹಾತ್ಮ ಕಬೀರ್ |
೧೯೫೩ | ಜಾತಕ ಫಲ |
೧೯೫೭ | ಪ್ರೇಮದ ಪುತ್ರಿ |
೧೯೬೧ | ವಿಜಯನಗರದ ವೀರಪುತ್ರ |
೧೯೬೩ | ಆನಂದಭಾಷ್ಪ |
೧೯೬೪ | ಪತಿಯೇ ದೈವ |
೧೯೬೭ | ಪ್ರೇಮಕ್ಕು ಪರ್ಮಿಟ್ಟೆ |
೧೯೬೯ | ನಮ್ಮ ಮಕ್ಕಳು |
೧೯೭೦ | ನಾಡಿನ ಭಾಗ್ಯ |
[ಬದಲಾಯಿಸಿ] ಇವರ ಅಭಿನಯದ ಕೆಲವು ಚಿತ್ರಗಳು
- ಅಪೂರ್ವ ಸಹೋದರರ್ಗಳ್-ಮಾರ್ತಾಂಡನ ಪಾತ್ರ
- ಸತಿ ಸುಲೋಚನಾ-ರಾವಣನ ಪಾತ್ರ
- ವಸಂತಸೇನಾ-ಶಕಾರನ ಪಾತ್ರ
- ಗಾಳಿ ಗೋಪುರ
- ವಿಜಯನಗರದ ವೀರಪುತ್ರ
- ನಮ್ಮ ಮಕ್ಕಳು
- ಹಣ್ಣೆಲೆ ಚಿಗುರಿದಾಗ
- ಚಂದ್ರಹಾಸ
- ಮದುವೆ ಮಾಡಿ ನೋಡು
- ವೀರ ಕೇಸರಿ
- ಕರುಳಿನ ಕರೆ
ಕನ್ನಡ ಚಲನಚಿತ್ರ ನಿರ್ದೇಶಕರು
ವೈ.ವಿ.ರಾವ್ | ಎಂ.ಆರ್.ವಿಠಲ್ | ಹೆಚ್.ಎಲ್.ಎನ್. ಸಿಂಹ | ಡಿ.ಶಂಕರ್ ಸಿಂಗ್ | ಬಿ.ಆರ್.ಪಂತುಲು | ಕಣಗಾಲ್ ಪ್ರಭಾಕರ ಶಾಸ್ತ್ರಿ | ಜಿ.ವಿ.ಅಯ್ಯರ್ | ಆರ್.ನಾಗೇಂದ್ರರಾಯ | ಬಿ.ಎಸ್.ರಂಗಾ | ಆರ್.ಎನ್.ಜಯಗೋಪಾಲ್ | ಗೀತಪ್ರಿಯ | ಹುಣಸೂರು ಕೃಷ್ಣಮೂರ್ತಿ | ಆರೂರು ಪಟ್ಟಾಭಿ | ಸಿದ್ಧಲಿಂಗಯ್ಯ | ಪುಟ್ಟಣ್ಣ ಕಣಗಾಲ್ | ಗಿರೀಶ್ ಕಾರ್ನಾಡ್ | ಎಂ.ಎಸ್.ರಾಜಶೇಖರ್ | ಬಿ ವಿ ಕಾರ೦ತ | ಪ್ರೇಮಾ ಕಾರಂತ | ಗಿರೀಶ್ ಕಾಸರವಳ್ಳಿ | ನಾಗತಿಹಳ್ಳಿ ಚಂದ್ರಶೇಖರ್ | ನಾಗಾಭರಣ | ಟಿ. ಪಟ್ಟಾಭಿರಾಮ ರೆಡ್ಡಿ | ಸುರೇಶ್ ಹೆಬ್ಳೀಕರ್ | ಭಾರ್ಗವ | ರಾಜೇಂದ್ರಸಿಂಗ್ ಬಾಬು | ಡಿ.ರಾಜೇಂದ್ರ ಬಾಬು | ದೊರೈ-ಭಗವಾನ್ | ಎನ್. ಲಕ್ಷ್ಮಿ ನಾರಾಯಣ್ | ಕೆ.ಎಸ್.ಎಲ್.ಸ್ವಾಮಿ(ರವೀ) | ತಿಪಟೂರು ರಘು | ಕೆ.ಬಾಲಚಂದರ್ | ಮಣಿರತ್ನಂ | ಶಂಕರ್ ನಾಗ್ | ಸಿಂಗೀತಂ ಶ್ರೀನಿವಾಸ ರಾವ್ | ಜೋಸೈಮನ್ | ರಮೇಶ್ ಭಟ್ | ರವಿಚಂದ್ರನ್ | ಕಾಶೀನಾಥ್ | ಫಣಿ ರಾಮಚಂದ್ರ | ಪಿ.ಹೆಚ್.ವಿಶ್ವನಾಥ್ | ಎಸ್.ನಾರಾಯಣ್ | ಓಂಪ್ರಕಾಶ್ ರಾವ್ | ಉಪೇಂದ್ರ | ಸುನೀಲ್ ಕುಮಾರ್ ದೇಸಾಯಿ | ಪ್ರೇಂ | ಮಹೇಂದರ್ | ಓಂ ಸಾಯಿಪ್ರಕಾಶ್ | ವಿ.ಮನೋಹರ್ | ಸುದೀಪ್ | ರಮೇಶ್ | ಮಾ.ಕಿಶನ್ | ಕವಿತಾ ಲಂಕೇಶ್| ಪಿ ಲಂಕೇಶ್ | ಇಂದ್ರಜಿತ್ ಲಂಕೇಶ್ | ರವಿ ಶ್ರೀವತ್ಸ | ಜಯಂತಿ | ಆರತಿ | ಲಕ್ಷ್ಮಿ | ಲೋಕೇಶ್ | ಟಿ.ವಿ.ಸಿಂಗ್ ಠಾಕೂರ್ | ವೈ.ಆರ್.ಸ್ವಾಮಿ |