ಅ.ರಾ.ಸೇತೂರಾಮರಾವ್

From Wikipedia

ಅ.ರಾ.ಸೇ. ಎಂದೇ ಖ್ಯಾತರಾಗಿರುವ ಶ್ರಿ ಅ.ರಾ.ಸೇತೂರಾಮರಾವ್ ಇವರು ೧೯೩೧ ಜನೆವರಿ ೨೬ರಂದು ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜನಿಸಿದರು. ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಅ.ರಾ.ಸೇ.ಯವರು ಕೊರವಂಜಿ ಬಳಗದ ಲೇಖಕರು. ಇವರ “ಮುಗಿಲುಹಳ್ಳಿ ಬಖೈರು” ಹಾಸ್ಯ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ.

ಹಾಸ್ಯಲೇಖನಗಳನ್ನಲ್ಲದೆ, ಇವರು ಕವನಸಂಗ್ರಹ, ಕಾದಂಬರಿ, ಗದ್ಯ ರೂಪಾಂತರ, ಪ್ರವಾಸ, ಜೀವನ ಚರಿತ್ರೆಗಳನ್ನೂ ಸಹ ಪ್ರಕಟಿಸಿದ್ದಾರೆ.