ಉಷಾ ಪಿ. ರೈ
From Wikipedia
ಉಷಾ ಪಿ. ರೈ ಕನ್ನಡ ಸಾಹಿತ್ಯಲೋಕದ ಹಿರಿಯ ಲೇಖಕಿ . ತುಳು ಹಾಗೂ ಇಂಗ್ಲೀಷ್ ನಲ್ಲೂ ಬರೆಯುತ್ತಿದ್ದಾರೆ. ಬರವಣಿಗೆಯ ಜೊತೆ ಕಸೂತಿ, ಸಮಾಜಸೇವೆ, ಚಿತ್ರಕಲೆ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯಲ್ಲಿ ಮೇ ೨೩ ೧೯೪೫ ರಲ್ಲಿ ಜನಿಸಿದ ಉಷಾ, ಎ೦.ಎ. ಪದವೀಧರೆ. ತಂದೆ ಸ್ವಾತಂತ್ರ್ಯ ಹೋರಾಟಗಾರ ಹಾಗು ನವಯುಗ ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತ ದಿ. ಕೆ ಹೊನ್ನಯ್ಯಶೆಟ್ಟಿ ಮತ್ತು ತಾಯಿ ಕೆ.ಪದ್ಮಾವತಿ ಶೆಟ್ಟಿ. ಪತಿ ಪ್ರಭಾಕರ ರೈಯವರು ಕೂಡಾ ತುಳು ಮತ್ತು ಕನ್ನಡ ಲೇಖಕ.
ಇವರ ಮೊದಲ ಕಾದಂಬರಿ "ಅನುಬಂಧ", ೧೯೭೪ ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯ್ತು. ನಂತರ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉಷಾ ಅವರ ಹನಿಗವನಗಳು, ಕಾದಂಬರಿಗಳು, ಸಣ್ಣಕಥೆಗಳು, ಪ್ರವಾಸ ಕಥನ , ಲೇಖನಗಳು , ಚಿಂತನಗಳು ಪ್ರಕಟಗೊಂಡಿವೆ.
ಪರಿವಿಡಿ |
[ಬದಲಾಯಿಸಿ] ಕಾದ೦ಬರಿಗಳು
- ಪರಿಭ್ರಮಣ - ೧೯೭೪
- ಅನುಬಂದ - ೧೯೭೫
- ಉತ್ತರಣ - ೧೯೭೮
- ಸುಪ್ತಸ್ವರ - ೧೯೮೬
- ನಿಶಾನೆ - ೧೯೮೯
- ಜಾಗೃತಿ - ೧೯೯೫
- ನಿಯತಿ - ೨೦೦೨
[ಬದಲಾಯಿಸಿ] ಕವನ ಸ೦ಕಲನ
[ಬದಲಾಯಿಸಿ] ಸಣ್ಣಕಥೆಗಳು
[ಬದಲಾಯಿಸಿ] ಪ್ರಬ೦ಧ ಸ೦ಕಲನ
- ಆಂತರ್ಯ - ೧೯೯೭
[ಬದಲಾಯಿಸಿ] ಪ್ರವಾಸ ಕಥನ
- ಲಕ್ಷದ್ವೀಪಕ್ಕೆ ಲಗ್ಗೆ ಇಟ್ಟಾಗ - ೨೦೦೪
[ಬದಲಾಯಿಸಿ] ಸ೦ಪಾದಿತ ಕೃತಿಗಳು
- ನವಯುಗದ ಪ್ರವರ್ತಕ - ೧೯೯೫
- ಲೇಖಕಿ - ೨೦೦೪
- ಲೇಖಲೋಕ ೩ - ೨೦೦೧
- ಲೇಖಲೋಕ ೪ - ೨೦೦೩
- ಲೇಖಕಿಯರ ಸಣ್ಣ ಕಥೆಗಳು (೨ ಭಾಗಗಳು)- ೨೦೦೫
- ಎಪ್ಪತ್ತರ ವಯಸು ಇಪ್ಪತ್ತರ ಮನಸು- ೨೦೦೫
- ತುಳು ಕಬಿತೆಲು ಬೊಕ್ಕ ಗಾದೆಲು - ೧೯೯೩
[ಬದಲಾಯಿಸಿ] ಪ್ರಶಸ್ತಿಗಳು
- ಅತ್ತಿಮಬ್ಬೆ ಗೊರೂರು ಪ್ರತಿಷ್ಠಾನ ಸುವರ್ಣ ಸ್ವಾತಂತ್ರ್ಯೋತ್ಸವ ಸನ್ಮಾನ
- ಕುರುಂಜಿ ವೆಂಕಟರಮಣ ಪ್ರತಿಭಾ ಪುರಸ್ಕಾರ
- ವಿಜಯಾ ಬ್ಯಾಂಕ್ ಕನ್ನಡ ಸಂಘದ ಗೌರವ
- ಸಾಹಿತ್ಯ ಪರಿಷತ್ತಿನಿ೦ದ ಕೊಡಲಾಗುವ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ - ೨೦೦೨
- ಸಾಹಿತ್ಯ ಪರಿಷತ್ತಿನ ನೀಲಗ೦ಗಾ ದತ್ತಿನಿಧಿ ಬಹುಮಾನ (ಹಕ್ಕಿ ಮತ್ತು ಗಿಡುಗ ಕೃತಿಗೆ)
- ಅಮ್ಮ ಪ್ರಶಸ್ತಿ ( ಹಕ್ಕಿ ಮತ್ತು ಗಿಡುಗ ಕೃತಿಗೆ)
[ಬದಲಾಯಿಸಿ] ಇತರೆ ವಿಷಯಗಳು
೧೯೭೪ ರಲ್ಲಿ ವಿಜಯಾ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಸೇರಿ ೨೫ ವರ್ಷ ಸೇವೆ ಸಲ್ಲಿಸಿದ್ದಾರೆ.
ಹಲವಾರು ಕವಿಗೋಷ್ಠಿಗಳಲ್ಲಿ , ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಸ್ತ್ರೀಲೋಕ ಕಾಯ೯ಕ್ರಮದ ಮೂಲಕ ಸ್ತ್ರೀಯರಿಗೆ ಸಂಬಂಧಪಟ್ಟ ಸಮಸ್ಯೆಗಳಬಗ್ಗೆ ವ್ಯಾಪಕವಾಗಿ ಚಚಿ೯ಸಿದ್ದಾರೆ. ೫ ವರುಷ 'ಕರ್ನಾಟಕ ಲೇಖಕಿಯರ ಸಂಘದ 'ಸಮಥ೯ ಅದ್ಯಕ್ಷಿಣಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕೃಷಿಯ ಜೊತೆಗೆ 'ಮಹಿಳಾ ದಕ್ಷತಾ ಸಮಿತಿ' ಮತ್ತು 'ವನಿತಾ ಸಹಾಯವಾಣಿ' ಕೇಂದ್ರಗಳಲ್ಲಿ ಸಹಾಯಕರಾಗಿ ದುಡಿದಿದ್ದಾರೆ.