ಮೊಹರೆ ಹನುಮಂತರಾಯರು
From Wikipedia
ಮೊಹರೆ ಹನುಮಂತರಾಯರು ೧೮೯೨ ರ ನವೆಂಬರ ೧೨ರಂದು ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಜನಿಸಿದರು. ವಿಜಾಪುರದಲ್ಲಿಯೇ ಶಿಕ್ಷಣ ಪೂರೈಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೇಲುವಾಸ ಅನುಭವಿಸಿದರು. ವಿಜಾಪುರದಲ್ಲಿ ಪ್ರಕಟವಾಗುತ್ತಿದ್ದ "ಕರ್ನಾಟಕ ವೈಭವ" ವಾರಪತ್ರಿಕೆಯ ಉಪಸಂಪಾದಕ ಹಾಗು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಬಳಿಕ, ೧೯೩೪ರಲ್ಲಿ , ಆಗ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಹಾಗು ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಕೆಲ ಕಾಲಾನಂತರ ಕರ್ಮವೀರ ವಾರಪತ್ರಿಕೆಯೂ ಸಹ ಪ್ರಾರಂಭವಾಯಿತು.೧೯೫೬ ಸಪ್ಟಂಬರದಲ್ಲಿ ಕನ್ನಡದ ಪ್ರಥಮ ಡೈಜೆಸ್ಟ ಕಸ್ತೂರಿ ಮಾಸಿಕವನ್ನು ಲೋಕಶಿಕ್ಷಣ ಟ್ರಸ್ಟ ಪರವಾಗಿ ಪ್ರಾರಂಭಿಸಿದರು.೧೯೫೮ರಲ್ಲಿ ಮೊಹರೆ ಹನುಮಂತರಾಯರು ನಿವೃತ್ತರಾದರು. ಮೊಹರೆ ಹನುಮಂತರಾಯರು ೧೯೬೦ ಜುಲೈ ೨೭ರಂದು ನಿಧನರಾದರು.