ನರಸಿಂಹರಾಜು
From Wikipedia
ನರಸಿಂಹರಾಜು ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ನಟ ಮತ್ತು ನಿರ್ಮಾಪಕ.(ಜನನ: ಜುಲೈ ೨೮,೧೯೨೬ - ಮರಣ: ಜುಲೈ ೧೧,೧೯೭೯).ಜನ್ಮಸ್ಥಳ ತುಮಕೂರು ಜಿಲ್ಲೆಯ ತಿಪಟೂರು.ತಂದೆ ರಾಮರಾಜು,ತಾಯಿ ವೆಂಕಟಲಕ್ಷ್ಮಮ್ಮ. ವೃತ್ತಿ ರಂಗಭೂಮಿ ಹಾಗೂ ಚಲನಚಿತ್ರ-ಎರಡೂ ಕ್ಷೇತ್ರಗಳಲ್ಲಿ ಹಾಸ್ಯಪಾತ್ರಗಳಿಂದ ಪ್ರಸಿದ್ಧರಾದವರು ಟಿ.ಆರ್.ನರಸಿಂಹರಾಜು. ನಕ್ಕರೆ ಅದೇ ಸ್ವರ್ಗ, ರಣಧೀರ ಕಂಠೀರವ (ಚಲನಚಿತ್ರ), ಪ್ರೊಫೆಸರ್ ಹುಚ್ಚುರಾಯ ಚಿತ್ರಗಳ ನಿರ್ಮಾಪಕರು.ಡಾ.ರಾಜ್ಕುಮಾರ್, ಜಿ.ವಿ.ಅಯ್ಯರ್ ಅವರೊದನೆ ಸೇರಿ ಸ್ಥಾಪಿಸಿದ "ಕನ್ನಡ ಚಲನಚಿತ್ರ ಕಲಾವಿದರ ಸಂಘ"ದ ಮೂಲಕವೇ ಚಲನಚಿತ್ರ ರಣಧೀರ ಕಂಠೀರವ ನಿರ್ಮಾಣವಾಯಿತು.ಸುಮಾರು ೨೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಮ್ಮ ಮಗ ಶ್ರೀಕಾಂತನ ಹೆಸರಿನಲ್ಲಿ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸಿದ ಚಿತ್ರ ಪ್ರೊಫೆಸರ್ ಹುಚ್ಚೂರಾಯ.
ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
[ಬದಲಾಯಿಸಿ] ನರಹಿಂಹರಾಜು ಅಭಿನಯದ ಕೆಲವು ಚಿತ್ರಗಳು
- ಬೇಡರ ಕಣ್ಣಪ್ಪ
- ಸ್ಕೂಲ್ ಮಾಸ್ಟರ್
- ಸಂಧ್ಯಾರಾಗ
- ಮಹಿಷಾಸುರ ಮರ್ದಿನಿ
- ಸಾಕ್ಷಾತ್ಕಾರ
- ಪ್ರೊಫೆಸರ್ ಹುಚ್ಚುರಾಯ
- ಸತ್ಯ ಹರಿಶ್ಚಂದ್ರ
- ವೀರಕೇಸರಿ
- ನಕ್ಕರೆ ಅದೇ ಸ್ವರ್ಗ
- ಶ್ರೀಕೃಷ್ಣದೇವರಾಯ
- ರಣಧೀರ ಕಂಠೀರವ
- ಪ್ರೀತಿ ಮಾಡು ತಮಾಷೆ ನೋಡು
- ಭಕ್ತ ಮಲ್ಲಿಕಾರ್ಜುನ
- ಮಹಾಕವಿ ಕಾಳಿದಾಸ
- ಭಕ್ತ ಮಾರ್ಕಂಡೇಯ
- ಬೆಟ್ಟದ ಹುಲಿ
- ಅಮರಶಿಲ್ಪಿ ಜಕಣಾಚಾರಿ
ತಮ್ಮ ಅಭಿಮಾನಿಗಳಿಂದ ಹಾಸ್ಯ ಚಕ್ರವರ್ತಿ,ಹಾಸ್ಯಬ್ರಹ್ಮ ಎಂಬ ಬಿರುದುಗಳಿಂದ ಸನ್ಮಾನಿತರಾಗಿದ್ದಾರೆ.