ಶ್ರೀ . ಹೆಜ್ಜೆ ಕೃಷ್ಟರಾಯರು, ಅಡ್ವೊಕೇಟ್, ಚಿತ್ರದುರ್ಗ.

From Wikipedia

ಪರಿವಿಡಿ

[ಬದಲಾಯಿಸಿ] ವೃತ್ತಿಯಲ್ಲಿ ಲಾಯರ್ ; ಪ್ರವೃತ್ತಿಯಲ್ಲಿ ವೈಜ್ಞಾನಿಕ ಮನೋಭಾವಿಗಳು :

ಶ್ರೀ ಎಚ್. ಜೆ. ಕೃಷ್ಣರಾಯರು, ಚಿತ್ರದುರ್ಗದ ಪ್ರಮುಖ ಅಡ್ವೊಕೇಟ್, ಗಳಲ್ಲಿ ಒಬ್ಬರಾಗಿದ್ದರು. ಅವರನ್ನು ಎಲ್ಲರೂ ಹೆಜ್ಜೆ ಕೃಷ್ಟರಾಯರೆಂದು ಕರೆಯತ್ತಿದ್ದರು. ಅವರಿದ್ದ ಕಾಲ, ಸುಮಾರು ೧೯೫೪ ರ ಹತ್ತಿರ ಹತ್ತಿರವಿರಬಹುದು. ಅವರು ಕೇವಲ ಲಾಯರ್ ಆಗಿರದೆ, ಅನೇಕ ವಿಷಯಗಳಲ್ಲಿ ತಮ್ಮ ಆಸಕ್ತಿಯನ್ನು ತೋರಿಸುತ್ತಿದ್ದರು. ತಮ್ಮ ಜಮೀನಿನಲ್ಲಿ ಅವರು, ಕೋರ್ಟಿಗೆ ರಜೆ, ಘೋಷಿಸಿದಾಗ, ಹೋಗಿ ಅಲ್ಲಿ ದಿನ-ವಿಡೀ ಇದ್ದು ಕೃ‍ಷಿಯಲ್ಲಿ ಜೋಳ, ಹತ್ತಿ, ರಾಗಿ, ಬೆಳೆಗಳಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದರು. ಅನುಸಂಧಾನ ಮಾಡುತ್ತಿದ್ದರು.


[ಬದಲಾಯಿಸಿ] ಸ್ವಂತ ಖರ್ಚಿನಲ್ಲಿ ಅನುಸಂಧಾನ, ಮತ್ತು ಒಂದು ಕೈಪಿಡಿಯ ರಚನೆ  :

ಒಂದು ಆಂಗ್ಲ ಪತ್ರಿಕೆಯಲ್ಲಿ Electroculture for Plants ಬಗ್ಗೆ ಪ್ರಕಟಿಸಿದ್ದ ವೈಜ್ಞಾನಿಕ ಲೇಖನ, ಅವರಿಗೆ ವಿಸ್ಮಯವನ್ನು ಆಸಕ್ತಿಯನ್ನೂ ತಂದಿತ್ತು. ಕೆಲವು ಗಿಡಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿದ್ಯುಚ್ಛಕ್ತಿಯನ್ನು ಪ್ರವಹಿಸಿದರೆ, ಕ್ರಮೇಣ ಅದರ ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬರುವುದಾಗಿ ತಿಳಿಸಲಾಗಿದ್ದ ಲೇಖನವನ್ನು ಅವರು, ಪದೇ ಪದೇ ಓದಿಕೊಂಡು ಅದರಂತೆಯೇ ತಮ್ಮ ಹೊಲದಲ್ಲಿ ಒಂದು ವೈಜ್ಞಾನಿಕ ಪರೀಕ್ಷೆಗಳನ್ನೇ ನಡೆಸಿ, ಅದರಲ್ಲಿ ಹಲವಾರು ವಿಷಿಷ್ಟ ಸಂಗತಿಗಳನ್ನು ಕಂಡುಕೊಂಡರು. ಅವುಗಳನ್ನೆಲ್ಲಾ ಅಚ್ಚುಕಟ್ಟಾಗಿ ಪ್ರಕಟಿಸಿ, ತಮ್ಮ ಹಸ್ತಪ್ರತಿಯಲ್ಲಿ ದಾಖಲಿದ್ದಾರೆ. ಹಳ್ಳಿಯರೈತರಿಂದ ಹಿಡಿದು, ನಗರದ ಪರಿಚಯಸ್ತರೆಲ್ಲರಿಗೂ ಆ ಪುಟ್ಟ ಕೈಪಿಡಿ ಲಭ್ಯವಾಗಿತ್ತು.


[ಬದಲಾಯಿಸಿ] ಮೀಡಿಯಾ ಪ್ರಭಾವವಿಲ್ಲದ ಸರಳಜೀವದಲ್ಲೂ, ಅನುಪಮಕೊಡುಗೆ :

ಇಂದಿನ ದಿನಗಳಲ್ಲಿ, ಮೀಡಿಯ ಎಷ್ಟು ಪ್ರಭಾವವನ್ನು ಬೀರುತ್ತದೆ. ಕೆಲವೇ ನಿಮಿಷಗಳಲ್ಲಿ ಒಬ್ಬ ವ್ಯಕ್ತಿ, ರಾಜ್ಯ,ದೇಶ, ಮತ್ತು ವಿಶ್ವಕ್ಕೇ ಪರಿಚಯಿಸಲ್ಪಡುತ್ತಾನೆ. ಹಾಗೆ ಇರಲಿಲ್ಲ ; ಆದಿನಗಳು. ಹೇಗಾದರೂ ಇರಲಿ, ಏನು ಬರೆದಿದ್ದಾರೆ ಎಂದು ಓದಿ ಪರಿಶೀಲಿಸುವಷ್ಟು ಉದಾರಮನಸ್ಸಿನ ಜನ, ಕಡಿಮೆಯಾಗಿದ್ದ ಕಾಲಘಟ್ಟ ಅದು. ಚಿತ್ರದುರ್ಗದ ಒಬ್ಬ ಕೃಷಿ ಅನುಸಂಧಾನಕರ್ತರೆಂದು ಕೆಲವರು ಅವರನ್ನು ಮೆಚ್ಚಿಕೊಂಡಿದ್ದರು. ವೈಜ್ಞಾನಿಕಮನೋವೃತ್ತಿಯನ್ನು ಆಗಿನ ಕಾಲದಲ್ಲೇ ಬೆಳಸಿಕೊಂಡು, ತಮ್ಮ ವೃತ್ತಿಯ ಜೊತೆಯಲ್ಲೇ ಪ್ರವೃತ್ತಿಯನ್ನೂ ಸಮತೂಗಿಸಿಕೊಂಡು ತಮ್ಮದೇ ಆದ ವಿಶಿಷ್ಠ ಕೊಡುಗೆಯನ್ನು ಅವರು ಕೊಟ್ಟಿದ್ದಾರೆ.


[ಬದಲಾಯಿಸಿ] ಆ ಪುಟ್ಟ ಕೈಪಿಡಿಯ ಹೆಸರು  :

  • ೧. "Electroculture, and its Advantages for the Plants"