ಆರ್.ಕೆ.ಸೂರ್ಯನಾರಾಯಣ

From Wikipedia

ಆರ್.ಕೆ.ಸೂರ್ಯನಾರಾಯಣ ವೀಣಾ ವಿದ್ವಾಂಸರಲ್ಲಿ ಪ್ರಮುಖವಾದ ಹೆಸರು.(ಜನನ:ಜೂನ್ ೧೪,೧೯೩೭.,ಮರಣ:ಡಿಸೆಂಬರ್ ೨೫,೨೦೦೩)ಸಂಗೀತ ಮನೆತನದಲ್ಲಿ ಜನಿಸಿದ ಇವರ ಸ್ಥಳ ಮೈಸೂರು.ತಂದೆ ಆರ್.ಎಸ್.ಕೇಶವಮೂರ್ತಿ,ತಾಯಿ ವೆಂಕಟಲಕ್ಷಮ್ಮ.ತಮ್ಮ ೨೧ನೇ ವಯಸ್ಸಿನಿಂದಲೇ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ವೀಣೆ ನುಡಿಸುವ ಮೂಲಕ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು.ಅಲ್ಲಿಂದ ಶುರುವಾದ ವೀಣಾ ವಾದನ ದೇಶ-ವಿದೇಶಗಳಲ್ಲಿ ವೀಣಾ ಕಚೇರಿ,ಧ್ವನಿಸುರುಳಿಗಳು,ರಾಷ್ಟ್ರಪತಿ ಎಸ್.ರಾಧಾಕೃಷ್ಣನ್‌ ರವರ ಪ್ರಶಂಸೆಯವರೆಗೆ ಸತತವಾಗಿ ಮುಂದುವರೆಯಿತು.ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ೬೦ಕ್ಕೂ ಹೆಚ್ಚು ಪ್ರಶಸ್ತಿಗಳು ಹಾಗೂ ಅನೇಕ ಬಿರುದುಗಳಿಂದ ಸಮ್ಮಾನಿತರಾಗಿದ್ದಾರೆ.ಸ್ವರಜಪ,ನವಗ್ರಹ ಕೀರ್ತನೆ,ರಾಗಮಾಲಿಕೆ,ತಿಲ್ಲಾನ,ಹಾಗೂ ಜಾವಳಿಗಳನ್ನೊಳಗೊಂಡ ೪೦೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮಲಯ ಮಾರುತ ಮತ್ತು ರಾಮಾನುಜಾಚಾರ್ಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.