ರಜನೀಕಾಂತ್
From Wikipedia
ರಜನೀಕಾಂತ್ (ಜನನ: ಡಿಸೆಂಬರ್ ೧೨ ೧೯೪೯) - ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. ಕನ್ನಡ ಚಿತ್ರರಂಗವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಜೀವನ
ರಜನೀಕಾಂತ್ ತಮ್ಮ ಶಾಲಾಶಿಕ್ಷಣವನ್ನು ನಡೆಸಿದ್ದು ಬೆಂಗಳೂರಿನಲ್ಲಿ. ಇವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರೂ, ರಜನಿಕಾಂತ್ ಪ್ರಸಿದ್ಧಿ ಪಡೆದಿದ್ದು ತಮಿಳು ಚಿತ್ರರಂಗದಲ್ಲಿ. ಚಿತ್ರರಂಗ ಪ್ರವೇಶಿಸುವ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಚಿತ್ರರಂಗಕ್ಕೆ ಸೇರಿದ ನಂತರ ಶಿವಾಜಿ ರಾವ್ ಗಾಯಕ್ವಾಡ್ ಅವರು ರಜನೀಕಾಂತ್ ಆದರು.
[ಬದಲಾಯಿಸಿ] ರಜನಿಕಾಂತ್ ಅಭಿನಯದ ಕನ್ನಡ ಚಿತ್ರಗಳು
೧. ಕಥಾಸಂಗಮ
೨. ಬಾಳು ಜೇನು
೩. ಒಂದು ಪ್ರೇಮದ ಕಥೆ
೪. ಸಹೋದರರ ಸವಾಲ್
೫. ಕುಂಕುಮ ರಕ್ಷೆ
೬. ಗಲಾಟೆ ಸಂಸಾರ
೭. ಕಿಲಾಡಿ ಕಿಟ್ಟು
೮. ಮಾತು ತಪ್ಪದ ಮಗ
೯. ಸವಾಲಿಗೆ ಸವಾಲ್
೧೦. ತಪ್ಪಿದ ತಾಳ (ಇದರಲ್ಲಿ ಕಮಲಹಾಸನ್ ಕೂಡ ನಟಿಸಿರುವುದು ವಿಶೇಷ, ಕೆ.ಬಾಲಚಂದರ್ ನಿರ್ದೇಶನ)
೧೧. ಪ್ರಿಯ
೧೨. ಘರ್ಜನೆ
[ಬದಲಾಯಿಸಿ] ರಜನೀಕಾಂತ್ ಅಭಿನಯದ ಪ್ರಮುಖ ತಮಿಳು ಚಿತ್ರಗಳು
- ಪಡೆಯಪ್ಪಾ
- ಭಾಷಾ
- ಚಂದ್ರಮುಖಿ
- ದಳಪತಿ
[ಬದಲಾಯಿಸಿ] ರಜನೀಕಾಂತ್ ಅಭಿನಯದ ಪ್ರಮುಖ ಹಿಂದಿ ಚಿತ್ರಗಳು
- ಹಮ್
- ಅಂಧಾ ಕಾನೂನ್
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕರು
ಸುಬ್ಬಯ್ಯ ನಾಯ್ಡು | ಉದಯಕುಮಾರ್ | ಕಲ್ಯಾಣಕುಮಾರ್ | ಡಾ. ರಾಜ್ಕುಮಾರ್ | ಗಂಗಾಧರ್ | ಡಾ. ವಿಷ್ಣುವರ್ಧನ್ | ರಾಜೇಶ್ | ಅಶೋಕ್ | ಅಂಬರೀಶ್ | ಶ್ರೀನಾಥ್ | ಪ್ರಭಾಕರ್ | ಅನಂತ ನಾಗ್ | ಶಂಕರ್ ನಾಗ್ | ಲೋಕೇಶ್ | ಮಾನು | ಕಾಶೀನಾಥ್ | ಮುರಳಿ(ಪ್ರೇಮಪರ್ವ) | ಚರಣ್ ರಾಜ್ | ವಿನೋದ್ ರಾಜ್ | ಶ್ರೀಧರ್ | ರಾಮಕೃಷ್ಣ | ಅರ್ಜುನ್ ಸರ್ಜಾ |ದೇವರಾಜ್ | ಸಾಯಿಕುಮಾರ್ | ರಾಮ್ಕುಮಾರ್ | ಥ್ರಿಲ್ಲರ್ ಮಂಜು | ಎಸ್.ನಾರಾಯಣ್ | ಜಗ್ಗೇಶ್ | ಉಪೇಂದ್ರ | ರವಿಚಂದ್ರನ್ | ಸುನಿಲ್ |ರಮೇಶ್ | ಸುದೀಪ್ | ಶಿವರಾಜ್ಕುಮಾರ್ | ಪುನೀತ್ ರಾಜ್ಕುಮಾರ್ | ರಾಘವೇಂದ್ರ ರಾಜ್ ಕುಮಾರ್ | ಮುರಳಿ | ವಿಜಯ ರಾಘವೇಂದ್ರ | ದರ್ಶನ್ ತೂಗುದೀಪ್ | ಸುನಿಲ್ ರಾವ್ | ಧ್ಯಾನ್| ಪ್ರೇಂ |ರಜನೀಕಾಂತ್