ಗೀತಪ್ರಿಯ
From Wikipedia
ಗೀತಪ್ರಿಯ - ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಂದು ಹೆಸರು.ಜನನ ೧೯೩೧ರ ಜೂನ್ ೧೫ರಂದು.ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ.ಬಾಲ್ಯಮಿತ್ರ ವಿಜಯಭಾಸ್ಕರ್ ಸಹಾಯದಿಂದ ೧೯೫೫ರಲ್ಲಿ ಶ್ರೀರಾಮಪೂಜಾ ಚಲನಚಿತ್ರಕ್ಕೆ ಗೀತೆ ಬರೆಯುವ ಅವಕಾಶ ದೊರಕಿತು.ವಿಜಯಭಾಸ್ಕರ್ ಅವರಿಂದಲೇ "ಗೀತಪ್ರಿಯ" ಎಂಬ ನಾಮಕರಣ.ಮಣ್ಣಿನಮಗ ಚಲಚಿತ್ರದಿಂದ ನಿರ್ದೇಶಕನ ಪಟ್ಟ ,ಜೊತೆಜೊತೆಗೆ ಹೆಸರು,ಪ್ರಶಸ್ತಿ.. ಎಲ್ಲವೂ ದಕ್ಕಿತು.
ಪರಿವಿಡಿ |
[ಬದಲಾಯಿಸಿ] ಗೀತರಚನೆ ಮಾಡಿದ ಕೆಲವು ಚಿತ್ರಗಳು
[ಬದಲಾಯಿಸಿ] ಇವರ ನಿರ್ದೇಶನದ ಕೆಲವು ಚಿತ್ರಗಳು
- ಮಣ್ಣಿನಮಗ-ಶತದಿನೋತ್ಸವ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ.
- ಯಾವ ಜನ್ಮದ ಮೈತ್ರಿ
- ಬೆಸುಗೆ-ಕಾದಂಬರಿ ಅಧಾರಿತ
- ಹೊಂಬಿಸಿಲು-ಕಾದಂಬರಿ ಅಧಾರಿತ
- ಶ್ರಾವಣ ಸಂಭ್ರಮ
- ಅನ್ಮೋಲ್ ಸಿತಾರೆ - ಹಿಂದಿ ಚಲನಚಿತ್ರ.
ಇವರು ಒಟ್ಟಾರೆ ೨೭ ಕನ್ನಡ ಚಿತ್ರಗಳು, ೨ ತುಳು ಹಾಗೂ ೧ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ೨ ಕಾದಂಬರಿ ಮತ್ತು ೨ ನಾಟಕಗಳು ಅಚ್ಚಾಗಿವೆ.
[ಬದಲಾಯಿಸಿ] ಇವರಿಗೆ ಸಂದ ಪ್ರಶಸ್ತಿಗಳು
- ೧೯೯೨ - ಕರ್ನಾಟಕ ರಾಜ್ಯಸರ್ಕಾರದಿಂದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
- ರಾಜ್ಯೋತ್ಸವ ಪ್ರಶಸ್ತಿ
ಹಲವು ಸಂಘ,ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.
[ಬದಲಾಯಿಸಿ] ಇವರು ರಚಿಸಿದ ಕೆಲವು ಜನಪ್ರಿಯ ಗೀತೆಗಳು
- ಆಡುತಿರುವ ಮೋಡಗಳೇ
- ನೀನೆಲ್ಲಿ ನಡೆವೆ ದೂರ
- ಇದೇನ ಸಭ್ಯತೆ,ಇದೇನ ಸಂಸ್ಕೃತಿ
- ಹಕ್ಕಿಯು ಹಾರುತಿದೆ
- ಎಲ್ಲರನ್ ಕಾಯೋ ದ್ಯಾವ್ರೆ
- ವೀಣಾ ನಿನಗೇಕೋ ಈ ಕಂಪನ
- ಜೀವ ವೀಣೆ ನೀಡು ಮಿಡಿತದ ಸಂಗೀತ