ಗವಿಸಿದ್ಧ ಎನ್.ಬಳ್ಳಾರಿ
From Wikipedia
ಗವಿಸಿದ್ಧ ಎನ್.ಬಳ್ಳಾರಿ ಇವರು ೧೯೫೦ರಲ್ಲಿ ರಾಯಚೂರು ಜಿಲ್ಲೆಯ ಕೊಪ್ಪಳದಲ್ಲಿ ಜನಿಸಿದರು. ಬಂಡಾಯ ಸಾಹಿತ್ಯದೊಡನೆ ಗುರುತಿಸಿಕೊಂಡರು ಮತ್ತು ಕೆಲ ಕಾಲ ಸ್ಥಳೀಯ ಪತ್ರಿಕೆಯೊಂದನ್ನು ಸಂಪಾದಿಸಿ ಪ್ರಕಟಿಸಿದರು. ಕರ್ನಾಟಕ ರಾಜ್ಯವನ್ನು ವಿಭಜಿಸಿ, ಪ್ರತ್ಯೇಕ ಹೈದರಾಬಾದು ರಾಜ್ಯ ಸ್ಥಾಪನೆಯಾಗ ಬೇಕೆಂದು ತಮ್ಮ ಕೊನೆಯುಸಿರನವರೆಗೆ ಹೋರಾಡಿದರು.
ಇವರ ಕವನ ಸಂಕಲನಗಳು: ಕತ್ತಲು ದೇಶದ ಪದ್ಯಗಳು, ಕಪ್ಪು ಸೂರ್ಯ (ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರೋತ್ಸಾಹಕ ಬಹುಮಾನ). ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ದೊರೆತಿದೆ.