ಜಯತೀರ್ಥ ರಾಜಪುರೋಹಿತ
From Wikipedia
ಜಯತೀರ್ಥ ರಾಜಪುರೋಹಿತ ಇವರು ೧೯೨೫ರಲ್ಲಿ ರಾಯಚೂರು ಜಿಲ್ಲೆಯ ಕನಕಗಿರಿಯಲ್ಲಿ ಜನಿಸಿದರು. ಐ.ಏ.ಎಸ್. ಅಧಿಕಾರಿಯಾದ ಇವರು ಆಡಳಿತದಲ್ಲಿ ಕನ್ನಡವನ್ನು ತರುವ ಸಲುವಾಗಿ ತುಂಬ ಶ್ರಮಿಸಿದವರು. ಇವರು ಕಥೆ, ಕಾದಂಬರಿ, ಜೀವನ ಚರಿತ್ರೆ ರಚಿಸಿದ್ದಲ್ಲದೆ ಅನುವಾದವನ್ನೂ ಸಹ ಮಾಡಿದ್ದಾರೆ.
ಇವರ ಕೆಲವು ಪ್ರಮುಖ ಕೃತಿಗಳು:
- ಸುಳಿಗಾಳಿ
- ಹಾಲು ಜೇನು
- ಜೋಹರ
- ಶಿಥಿಲ ಶಿಲೆ
- ಮೌಲ್ಯಗಳು
- ಜಗನ್ನಾಥದಾಸರು
- ಸುರಪುರದ ಶೂರನಾಯಕರು
- ಕಡಲ ತೋಳ
- ಕೃಷ್ಣದೇವರಾಯ
- ಕನ್ನಡದಲ್ಲಿ ತೀರ್ಪುಗಳು
ಇವರು ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದರು.