ನೆಲಮುಗಿಲು
From Wikipedia
ಜೀ ಕನ್ನಡದಲ್ಲಿ ಟಿ.ಎಸ್ ನಾಗಾಭರಣ ನಿರ್ದೇಶನದ ನೆಲ ಮುಗಿಲುTS NAGABHARANA DIRECTED nelamugilu IN ZEE KANNADA
ಹೊಸ ಶೈಲಿ, ಹೊಸ ಕಥೆ, ಉತ್ತಮ ನಿರ್ದೇಶಕರ ಉತ್ತಮ ಧಾರಾವಾಹಿಯನ್ನು ಜೀ ಕನ್ನಡ ತನ್ನ ವೀಕ್ಷಕರಿಗಾಗಿ ನೀಡುತ್ತಿದೆ. ‘ನೆಲ ಮುಗಿಲು’ ಮಹಿಳೆಯ ವಿವಿಧ ಗುಣಗಳನ್ನು ಪ್ರತಿನಿಧಿಸುವ ನಾಲ್ವರು ಮಹಿಳೆಯರ ಸುತ್ತ ಹೆಣೆದ ಕಥೆ. ‘ನೆಲ ಮುಗಿಲು’ ತನ್ನ ಕಥೆಯ ಮುಖ್ಯ ಪಾತ್ರಗಳ ಮುಲಕ ಇಂದಿನ ಸಮಾಜದಲ್ಲಿಯ ಬದಲಾವಣೆ ಮತ್ತು ಬೆಳವಣಿಗೆ, ಸ್ವಾತಂತ್ರ ಮತ್ತು ಸ್ವೆಚ್ಚೆಯ ವಿವಿಧ ಮಗ್ಗಲುಗಳನ್ನು ಚಿತ್ರಿಸಿದೆ.
ವರ್ತಮಾನದ ಶಿಕ್ಷಣ ವಿಧಾನ, ಭಾಷಾ ಸಮಸ್ಯೆ, ಪರಿಕ್ಷಾ ಹಗರಣಗಳು, ಪ್ರಶ್ನೆ ಪತ್ರಿಕೆ ಬಯಲು, ಶಿಕ್ಷಣ ಶುಲ್ಕ, ಡೋನೇಶನ್ ಹಾವಳಿ, ಮನೆಪಾಠ ಪದ್ದತಿ, ಶೈಕ್ಷಣಿಕ ಪದ್ಧತಿಯ ದುರ್ಬಳಕೆ, ಮುಂತಾದ ವಿಷಯಗಳ ಚರ್ಚೆಯು ಪಾತ್ರಗಳ ಮುಲಕ ಆಗುತ್ತಿರುತ್ತದೆ.‘ನೆಲ ಮುಗಿಲು’ ಜೀ ಕನ್ನಡದ ಮಗದೊಂದು ಹೊಚ್ಚ ಹೊಸ ಧಾರಾವಾಹಿ. ಟಿ.ಎಸ್. ನಾಗಾಭರಣ ಇದನ್ನು ನಿರ್ದೇಶಿಸುತ್ತಿದ್ದು, ಎಲ್ಲಾ ವರ್ಗದ ಜನರೂ ಜೊತೆಯಲ್ಲಿ ಕುಳಿತು ನೋಡುವಂತಹ ಕಥಾನಕವನ್ನು ಒಳಗೊಂಡಿದೆ.
ಟಿ.ಎಸ್.ನಾಗಾಭರಣರವರು ೧೪ ರಾಜ್ಯ ಹಾಗೂ ೭ ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಕನ್ನಡದ ಏಕೈಕ ನಿರ್ದೇಶಕರಾಗಿದ್ದಾರೆ. ‘ಆಕಸ್ಮಿಕ’, ‘ಮೈಸೂರು ಮಲ್ಲಿಗೆ’, ‘ಚಿನ್ನಾರಿ ಮುತ್ತ’, ‘ನಾಗಮಂಡಲ’, ‘ಜನುಮದ ಜೋಡಿ’ ಮುಂತಾದ ಪ್ರಸಿದ್ದ ಸಿನಿಮಾಗಳ ನಿರ್ದೇಶನದ ಕೀರ್ತಿ ನಾಗಾಭರಣರಿಗಿದೆ. ಖ್ಯಾತ ನಿರ್ದೇಶಕರಾದ ಇವರ ನಿರ್ದೇಶನದ ಈ ಧಾರಾವಾಹಿಯು ವೀಕ್ಷಕರ ನಿರೀಕ್ಷೆಗಳನ್ನು ಸುಳ್ಳಾಗಿಸದು ಎಂಬುದು ಇವರ ಅಭಿಪ್ರಾಯ.
‘ನೆಲಮುಗಿಲು’ ನಾಲ್ಕು ಪಾತ್ರಗಳ ಸುತ್ತ ಹೆಣೆದ ಕಥೆ. ಒಂದು ಶಾಲೆಯ ಸುತ್ತ ಹೆಣೆಯಲಾಗಿದೆ. ಅನಸೂಯಾ ರೆಡ್ಡಿ (ಮುಖ್ಯ ಭೂಮಿಕೆಯಲ್ಲಿರುವ ಒಂದು ಪಾತ್ರ) ಎಂಬ ಮಹಿಳೆಯ ನೇತ್ರತ್ವದಲ್ಲಿ ನಡೆಯುತ್ತಿರುವ ಶಾಲೆಯ ಜಾಗೆಯು ಲ್ಯಾಂಡ್ ಮಾಫಿಯಾ ಸುಳಿಗೆ ಸಿಕ್ಕು ನರಳುವಂತಾಗುತ್ತದೆ. ಮುಂದಿನ ಪಿಳಿಗೆಯ ಜೀವನದ ಬುನಾದಿಯಾಗಬೇಕಾದ ಶಾಲೆ ಮಾಫಿಯಾದ ಸುಳಿಗೆ ಸಿಲುಕಿ ನರಳಬೇಕಾಗುತ್ತದೆ.ರೋಹಿಣಿ, ಸರಸ್ವತಿ ಮತ್ತು ಗೌರಿ (ಮುಖ್ಯ ಭೂಮಿಕೆಯಲ್ಲಿರುವ ಇತರರು). ತಮ್ಮ ಉತ್ತಮ ನಡವಳಿಕೆ ಮತ್ತು ವಿಚಾರಧಾರೆಯಿಂದ ಯುವ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಉತ್ತಮ ಪ್ರಭಾವ ಬೀರಿರುತ್ತಾರೆ. ಈ ನಾಲ್ವರು ಮಹಿಳಾ ಪಾತ್ರಗಳ ಮುಲಕ ನಿರ್ದೇಶಕರು ಶಾಲಾ ಶಿಕ್ಷಕರ ಬಗ್ಗೆ ಚರ್ಚೆಗೆ ಒಂದು ವೇದಿಕೆ ಒದಗಿಸಿಕೊಡುತ್ತಿದ್ದಾರೆ. ಹಾಗೆಯೇ ಮಹಿಳೆಯು ಇಂದಿನ ಬದಲಾವಣೆಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಚಿತ್ರಿಸುತ್ತಾ ಸಾಗುತ್ತಾರೆ.
ಆಳ ವ್ಯಕ್ತಿತ್ವದ ಪಾತ್ರಗಳ ಮುಲಕ ಹೆಣೆಯಲಾದ ಈ ಧಾರಾವಾಹಿಯು ದಿನನಿತ್ಯ ಕುತೂಹಲ ಉಳಿಸಿಕೊಳ್ಳುತ್ತದೆ. ಈ ದೈನಿಕ ಧಾರಾವಾಹಿಯನ್ನು ಎಲ್ಲ ವಯೋಮಿತಿಯ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಹೆಣೆಯಲಾಗಿದೆ.
ತಾರಾಗಣ: ಸಾರಿಕಾ ರಾಜ್ ಅರಸ್, ಶಂಕರ್ ಅಶ್ವಥ್, ಸಿಂಧು, ಪಾವನಾ ಸಿಂಗ್, ಸಂಗೀತಾ ಶೆಟ್ಟಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: veena.dsouza@k2communications.in