ಬಿ.ಜಯಶ್ರೀ
From Wikipedia
ಬಿ.ಜಯಶ್ರೀ ವೃತ್ತಿರಂಗಭೂಮಿಯಿಂದ ಹಿಡಿದು,ಚಲನಚಿತ್ರ,ಕಿರುತೆರೆಯವರೆಗೆ ಎಲ್ಲ ರಂಗಗಳಲ್ಲೂ ಹೆಸರು ಮಾಡಿರುವ ಕಲಾವಿದೆ.ಹುಟ್ಟಿದ್ದು ೧೯೫೦, ಜೂನ್ ೯ರಂದು ಬೆಂಗಳೂರಿನಲ್ಲಿ.ತಂದೆ ಬಸವರಾಜ್.ತಾಯಿ ಜಿ.ವಿ.ಮಾಲತಮ್ಮ.ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ ಗುಬ್ಬಿ ವೀರಣ್ಣನವರ ಮೊಮ್ಮಗಳು ಕೂಡಾ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ.
ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ.ರಂಗಭೂಮಿಯ ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು.
ಪರಿವಿಡಿ |
[ಬದಲಾಯಿಸಿ] ಇವರ ಅಭಿನಯದ ಕೆಲವು ನಾಟಕಗಳು
- ನಾಗಮಂಡಲ.
- ತಾಯಿ-ನಿರ್ದೇಶಕ ಪ್ರಸನ್ನ.
[ಬದಲಾಯಿಸಿ] ಇವರು ನಿರ್ದೇಶಿಸಿದ ನಾಟಕಗಳು
- ಡೆತ್ ಆಫ್ ಎ ಸೇಲ್ಸ್ಮನ್
- ಕರಿಮಾಯಿ
- ಬ್ಯಾರಿಸ್ಟರ್
- ಲಕ್ಷಾಪತಿ ರಾಜನ ಕತೆ
- ಉರಿಯ ಉಯ್ಯಾಲೆ
- ವೈಶಾಖ
- ಯಕ್ಷನಗರಿ
- ನಹಿ ನಹಿ ರಕ್ಷತಿ
- ನೀಲಿ-ಕುದುರೆ
- ನಾಗಮಂಡಲ
- ಜಸ್ಮಾ ಓಡನ್
- ಅಗ್ನಿಪಥ ಚಿತ್ರಪಟ
- ಸಿರಿಸಂಪಿಗೆ.
ವಿದೇಶಿ ಸಂಸ್ಥೆಯ ಅನುದಾನದಿಂದ ನಿರ್ಮಿತ ನಾಟಕ ಲಕ್ಷಾಪತಿ ರಾಜನ ಕತೆ ಹಾಗೂ ವಿದೇಶದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ ನಾಟಕ ಕಿನ್ನರಿ ಜೋಗಿರಾಟ- ಇವರ ವೃತ್ತಿಜೀವನದ ಮೈಲಿಗಲ್ಲುಗಳು.ಸ್ವೀಡನ್, ಕೈರೋ, ಸ್ಕಾಟ್ಲೆಂಡ್ ರಂಗೋತ್ಸವಗಳಲ್ಲಿ ಭಾಗವಹಿಸಿದ್ದಾರೆ.ಅಮೆರಿಕದಲ್ಲಿ ಹೂವಿ ನಾಟಕ ನಿರ್ದೇಶಿಸಿದ್ದಾರೆ.
[ಬದಲಾಯಿಸಿ] ಸಿನಿಮಾ ನಂಟು
ಕನ್ನಡ ಚಲನಚಿತ್ರ ನಾಗಮಂಡಲ ದಲ್ಲಿ ಅಭಿನಯಿಸಿದ್ದಾರೆ..ಎಂ.ಎಸ್.ಸತ್ಯು ಅವರ ಗಳಿಗೆ, ಭಾವ ಭಾಮೈದ ಇವರ ಅಭಿನಯದ ಇತರ ಚಿತ್ರಗಳು.ಇವರು ನನ್ನ ಪ್ರೀತಿಯ ಹುಡುಗಿ ಚಿತ್ರಕ್ಕೆ ಹಾಡಿರುವ ಕಾರ್ ಕಾರ್ ಕಾರ್ ಕಾರ್,ಎಲ್ನೋಡಿ ಕಾರ್ ಎಂಬ ಗೀತೆ ಎಲ್ಲರ ಮನಸೂರೆಗೊಂಡಿದೆ.ಯಾರೇ ನೀನು ಅಭಿಮಾನಿ ಚಿತ್ರದ ಚಕ್ಕೋತ ಚಕ್ಕೋತ ಹಾಡು ಕೇಳುಗರಲ್ಲಿ ಹುಚ್ಚೆಬ್ಬಿಸಿದೆ.ಇವರ ಗಾಯನದ ಏನಾ ಏನಿದು ಎಂಥಾ ಬೆರಗಾ, ರಂಗಗಣಪ ಎಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಈಟಿವಿ ಕನ್ನಡದ ಜನಪ್ರಿಯ ಧಾರಾವಾಹಿ ಪ್ರೀತಿ ಇಲ್ಲದ ಮೇಲೆಯ ಅಜ್ಜಿ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
[ಬದಲಾಯಿಸಿ] ಪ್ರಶಸ್ತಿಗಳು
- ಸಫ್ದಾರ್ ಹಷ್ಮಿ ಪ್ರಶಸ್ತಿ.
ಅನೇಕ ಗೌರವ ಪ್ರಶಸ್ತಿಗಳು ಸಂದಿವೆ.
ವರ್ಗಗಳು: ಕನ್ನಡ ಸಿನೆಮಾ | ರಂಗಭೂಮಿ | ಚುಟುಕು