ಧೀರೇಂದ್ರ ಗೋಪಾಲ್

From Wikipedia

ಧೀರೇಂದ್ರ ಗೋಪಾಲ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಲ್ಲೊಬ್ಬರು.(ಜನನ:ಏಪ್ರಿಲ್ ೧೨,೧೯೪೮ - ಮರಣ:ಡಿಸೆಂಬರ್ ೨೫,೨೦೦೦).ಕನ್ನಡ ಚಿತ್ರರಂಗದ ಮಾತಿನಮಲ್ಲ ಎಂದೇ ಖ್ಯಾತರಾಗಿದ್ದ ಧೀರೇಂದ್ರ ಗೋಪಾಲ್‌ ರವರ ನಿಜವಾದ ಹೆಸರು ಹೆಚ್.ಎನ್.ಗೋಪಾಲ್‌ರಾವ್.ಜನಿಸಿದ್ದು ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಜೋಡಿಗುಬ್ಬಿ ಗ್ರಾಮದಲ್ಲಿ .ಬಾಲ್ಯದಿಂದಲೇ ನಾಟಕದ ಗೀಳು.ಕರಪತ್ರ ಹಂಚುವುದರಿಂದ ಪರದೆ ಎಳೆಯುವವರೆಗೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. 'ವಾಲಿ'ಯ ಪಾತ್ರದ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದವರು,ದೇವೇಂದ್ರ,ದುರ್ಯೋಧನನ ಪಾತ್ರದಿಂದ ಪ್ರಸಿದ್ಧಿ ಪಡೆದರು.'ಸರ್ವಮಂಗಳ ನಾಟಕ ಸಭಾ'ದ 'ಟಿಪ್ಪು'ವಿನ ಪಾತ್ರದ ಮೂಲಕ ಜನಪ್ರಿಯರಾದರು.ಇವರ ಕಂಚಿನ ಕಂಠಕ್ಕೆ ಮಾರುಹೋದ ನಿರ್ದೇಶಕ ಸಿ.ವಿ.ಶಿವಶಂಕರ್ ಬೆಳ್ಳಿತೆರೆಗೆ ಎಳೆತಂದರು.ನಾಗರಹಾವು ಚಿತ್ರದ ಅಭಿನಯದಿಂದ ಉದ್ಯಮದ ಗಮನ ಸೆಳೆದರು.ಪಡುವಾರಹಳ್ಳಿ ಪಾಂಡವರು ಚಿತ್ರದ ಮೂಲಕ ಜನಪ್ರಿಯರಾದರು. ಧೀರೇಂದ್ರ ಗೋಪಾಲ್ ಅವರ ಮಾತಿನ ಧಾಟಿ,ಅದಕ್ಕೆ ಹೊಂದುವ ಮುಖಭಾವ,ಅಭಿನಯ ,ಕಂಠ ಅವರಿಗೇ ವಿಶಿಷ್ಟವಾದದ್ದು.ಹಾಸ್ಯ,ಖಳ,ಪೋಷಕ..ಹೀಗೆ ಯಾವುದೇ ಪಾತ್ರವಾದರೂ ಅದರಲ್ಲಿ ಅವರದ್ದೇ ಆದ ಛಾಪು ಮೂಡಿಸಿ'ಸೈ'ಅನಿಸಿಕೊಳ್ಳುತ್ತಿದ್ದರು. ಇವರ ಕೊನೇಯ ಚಿತ್ರ ಎಸ್. ನಾರಾಯಣ್ ನಿರ್ದೇಶನದ ಅಂಜಲಿ ಗೀತಾಂಜಲಿ.

[ಬದಲಾಯಿಸಿ] ಇವರ ಅಭಿನಯದ ಕೆಲವು ಚಿತ್ರಗಳು

[ಬದಲಾಯಿಸಿ] ಪ್ರಶಸ್ತಿಗಳು

  • ೧೯೯೮ - ರಾಜ್ಯೋತ್ಸವ ಪ್ರಶಸ್ತಿ.