ಈಚನೂರು ಜಯಲಕ್ಷ್ಮಿ

From Wikipedia

ಈಚನೂರು ಜಯಲಕ್ಷ್ಮಿಯವರು (ಜೂನ್ ೨೧, ೧೯೪೭ - ) ಜನಿಸಿದ್ದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಗ್ರಾಮದಲ್ಲಿ. ತಂದೆ ಪ್ರಸಿದ್ಧ ಸೂತ್ರದ ಬೊಂಬೆಯಾಟಗಾರ ಸೀತಾರಾಮಯ್ಯ ಮತ್ತು ತಾಯಿ ಸಾವಿತ್ರಮ್ಮ. ಜಯಲಕ್ಷ್ಮಿಯವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ ಪಡಿದಿದ್ದಾರೆ. ಅನೇಕ ಕಥೆಗಳು, ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.

[ಬದಲಾಯಿಸಿ] ಕಾದಂಬರಿಗಳು

  • ಬಾಳ ಪಲ್ಲವಿ
  • ಮೋಡದ ಮನೆ
  • ಹೆಜ್ಜೆ ಮೂಡದ ಹಾದಿ
  • ಅಂತರ್ಗೀತ
  • ಆಗಂತುಕರು
  • ಹಿಮ ತೊಳೆದ ಹೂವು
  • ನಾಂದಿ
  • ಅಗ್ನಿರೇಖೆ
  • ಸಮಶೃತಿ
  • ಚುಕ್ಕಿ ತಪ್ಪಿದ ರಂಗೋಲಿ
  • ಕಡಲಿನ ಒಡಲು
  • ಅಸಹಾಯಕರು
  • ಮಾನಸರಾಗ
  • ಹಳೆಬೇರು ಹೊಸ ಚಿಗುರು
  • ವಸಂತ ಪಲ್ಲವಿ
  • ಪ್ರೇಮಬಂಧನ
  • ಹಿಮದ ಬೊಂಬೆ

[ಬದಲಾಯಿಸಿ] ಕಥಾ ಸಂಕಲನಗಳು

  • ಒಳಗೂ ಹೊರಗೂ
  • ಅಂತರಾಳದಲ್ಲೊಂದು ಕಿರುದನಿ
  • ಒಮ್ಮೊಮ್ಮೆ
  • ಕಿರುದನಿ
  • ನಂಬಿಕೆ
  • ಬೊಂಬೆಯಾಟ