ಹುಯಿಲಗೋಳ ನಾರಾಯಣರಾಯರು
From Wikipedia
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಸರಿಯಾದ ಲೇಖನ ಹುಯಿಲಗೋಳ ನಾರಾಯಣರಾಯ
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಸರಿಯಾದ ಲೇಖನ ಹುಯಿಲಗೋಳ ನಾರಾಯಣರಾಯ
ಹುಯಿಲಗೋಳ ನಾರಾಯಣರಾಯರು: || “ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”|| ಖ್ಯಾತಿಯ ಕವಿ ||ಹುಯಿಲಗೋಳ ನಾರಾಯಣರಾಯರು|| ೪-೧೦-೧೮೮೪ ರಂದು ಜನಿಸಿದರು. ಇವರ ತಂದೆ ಕೃಷ್ಣರಾಯರು, ತಾಯಿ ಬಹಿಣಕ್ಕ. ಇವರ ಬಾಲ್ಯದ ಶಿಕ್ಷಣ ಗದಗು, ಗೋಕಾಕ ಹಾಗು ಧಾರವಾಡಗಳಲ್ಲಿ ಆಯಿತು. ೧೯೦೨ರಲ್ಲಿ ಧಾರವಾಡದ ಪ್ರೌಢಶಾಲೆಯಲ್ಲಿ ಮ್ಯಾಟ್ರಿಕ್ ಪರೀಕ್ಷೆಯನ್ನು ಮುಗಿಸಿದರು. ೧೯೦೭ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ಪದವಿಯನ್ನು ಪಡೆದರು. ಬಳಿಕ ಧಾರವಾಡದ ವ್ಹಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಕೆಲ ಸಮಯದ ನಂತರ ಮುಂಬಯಿಗೆ ತೆರಳಿ, ಕಾನೂನು ಪದವಿಯನ್ನು ಪಡೆದು ಗದಗಿಗೆ ಹಿಂತಿರುಗಿದರು. ೧೯೧೧ರಲ್ಲಿ ವಕೀಲಿ ವೃತ್ತಿ ಆರಂಭಿಸಿ ಸುಮಾರು ನಾಲ್ಕೂವರೆ ದಶಕಗಳವರೆಗೆ ವೃತ್ತಿನಿರತರಾಗಿದ್ದರು.
ನಾರಾಯಣರಾಯರು ಮುಖ್ಯತಃ ಕನ್ನಡ ರಂಗಭೂಮಿಗಾಗಿ ಅನೇಕ ನಾಟಕಗಳನ್ನು ರಚಿಸಿದರು. ಅವು ಇಂತಿವೆ:
ಮೋಹಹರಿ(೧೯೦೪); ವಜ್ರಮುಕುಟ(೧೯೧೦); ಪ್ರೇಮಾರ್ಜುನ(೧೯೧೨); ಕನಕವಿಲಾಸ(೧೯೧೩); ಅಜ್ಞಾತವಾಸ(೧೯೧೫); ಪ್ರೇಮವಿಜಯ(೧೯೧೬);ಸಂಗೀತ ಕುಮಾರರಾಮ ಚರಿತ(೧೯೧೭);ಭಾರತ ಸಂಧಾನ(೧೯೧೮); ಸ್ತ್ರೀಧರ್ಮರಹಸ್ಯ(೧೯೧೯);ಶಿಕ್ಷಣ ಸಂಭ್ರಮ(೧೯೨೦); ಉತ್ತರ ಗೋಗ್ರಹಣ(೧೯೨೨), ಪತಿತೋದ್ಧಾರ(೧೯೫೨. ತಮ್ಮ ನಾಟಕಗಳ ಮೂಲಕ ಸ್ವಾತಂತ್ರ್ಯದ ಹಾಗೂ ಸಾಮಾಜಿಕ ಸುಧಾರಣೆಯ ಸಂದೇಶಗಳನ್ನು ನಾರಾಯಣರಾಯರು ಸಮಾಜಕ್ಕೆ ನೀಡಿದರು. ೧೯೫೪ರಲ್ಲಿ ಇವರ “ ಪತಿತೋದ್ಧಾರ” ನಾಟಕಕ್ಕೆ ಮುಂಬಯಿ ಸರಕಾರದ ಬಹುಮಾನ ದೊರೆಯಿತು. ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆ ಗದಗಿನಲ್ಲಿ “ ವಿದ್ಯಾದಾನ ಸಮಿತಿ” ಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು.
ಹುಯಿಲಗೋಳ ನಾರಾಯಣರಾಯರ ಗೀತೆಗಳು ಹಾಗು ಲೇಖನಗಳು ಆ ಕಾಲದ ಪತ್ರಿಕೆಗಳಾದ “ ಜೈ ಕರ್ನಾಟಕ ವೃತ್ತ, ಜಯ ಕರ್ನಾಟಕ, ಪ್ರಭಾತ, ಧನಂಜಯ” ಇವುಗಳಲ್ಲಿ ಪ್ರಕಟವಾಗಿವೆ. ಇವರ ಖ್ಯಾತ ನಾಡಗೀತೆಯಾದ “ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ, ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿದ್ದ, ೧೯೨೪ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಹುಯಿಲಗೋಳ ನಾರಾಯಣರಾಯರು ಜುಲೈ ೧೯೭೧ರಲ್ಲಿ ನಿಧನರಾದರು.