ವಾಣಿ (ಬಿ.ಎನ್.ಸುಬ್ಬಮ್ಮ)

From Wikipedia

ವಾಣಿ ಕಾವ್ಯನಾಮದ ಬಿ.ಎನ್.ಸುಬ್ಬಮ್ಮನವರು ೧೯೧೭ ಮೇ ೧೨ ರಂದು ಹಾಸನದಲ್ಲಿ ಜನಿಸಿದರು. ತಂದೆ ಬಿ.ನರಸಿಂಗರಾವ್. ಮೆಟ್ರಿಕ್ ವರೆಗೆ ಮಾತ್ರ ಓದಿದ ವಾಣಿಯವರು ಸುಮಾರು ೧೯ ಕಾದಂಬರಿಗಳನ್ನು ಬರೆದಿದ್ದಾರೆ. ವಾಣಿಯವರ ಪತಿ ವಕೀಲರಾದ ನಂಜುಂಡಯ್ಯನವರು.

ಕಥಾಸಂಕಲನಗಳು: ಕಸ್ತೂರಿ, ಅರ್ಪಣೆ, ನಾಣಿಯ ಮದುವೆ, ಅಪರೂಪದ ಅತಿಥಿ

ಕಾದಂಬರಿಗಳು: ಬಿಡುಗಡೆ, ಚಿನ್ನದ ಪಂಜರ, ಮನೆ ಮಗಳು, ಅವಳ ಭಾಗ್ಯ, ಕಾವೇರಿಯ ಮಡಿಲಲ್ಲಿ, ಅಂಜಲಿ, ಬಾಳೆಯ ನೆರಳು, ಅನಿರೀಕ್ಷಿತ, ಹೂವು ಮುಳ್ಳು, ಪ್ರೇಮಸೇತು, ಬಲೆ, ತ್ರಿಶೂಲ, ಶಿಶಿರಗಾನ, ಸುಲಗ್ನಾ ಸಾವಧಾನ, ಕೊಡುಗೆ, ಹಾಲು ಒಡೆದಾಗ, ಶುಭಮಂಗಳ, ಎರಡು ಕನಸು, ಹೊಸ ಬೆಳಕು.( ಶುಭಮಂಗಳ, ಎರಡು ಕನಸು ಹಾಗು ಹೊಸ ಬೆಳಕು ಇವು ಚಲನಚಿತ್ರಗಳಾಗಿವೆ.)

ವಚನ ಸಂಕಲನ: ‘ನವನೀತ’ ( ೫೧೮ ವಚನಗಳ ಸಂಕಲನ).

ಇವರ ಮನೆ ಮಗಳು ಕಾದಂಬರಿಗೆ ೧೯೬೨ ರಲ್ಲಿ ಕರ್ನಾಟಕ ರಾಜ್ಯಸರಕಾರದ ಬಹುಮಾನ ದೊರೆತಿದೆ.

ವಾಣಿಯವರು ೧೯೮೮ ಫೆಬ್ರುವರಿ ೧೪ ರಂದು ನಿಧನರಾದರು.