ಶ್ರೀಮತಿ ಕರ್ನಾಟಕ

From Wikipedia

ಈ ಲೇಖನವು ಜಾಹೀರಾತಿನಂತೆ ಬರೆಯಲ್ಪಟ್ಟಿದೆ.
ವಿಶ್ವಕೋಶಕ್ಕೆ ತಕ್ಕಂತೆ ಸಮಾನ ದೃಷ್ಟಿಕೋನವುಳ್ಳುವಂತೆ ಇದನ್ನು ಬದಲಾಯಿಸಲು ದಯವಿಟ್ಟು ಸಹಕರಿಸಿ.
ಜಾಹೀರಾತಿಗಾಗಿಯೇ ಇದನ್ನು ಬರೆಯಲ್ಪಟ್ಟಿದೆಯೆಂದು ಸಮುದಾಯ ತೀರ್ಮಾನಿಸಿದರೆ ಈ ಲೇಖನವನ್ನು ಅಳಿಸುವಿಕೆಗೆ ಗುರುತುಮಾಡಿ.


ಕರ್ನಾಟಕದ "ಶ್ರೀಮತಿ"ಯರ ಶ್ರಮಕ್ಕೊಂದು ಪುರಸ್ಕಾರ


ಶ್ರೀಮತಿ ಕರ್ನಾಟಕ''' ಗ್ರಹಿಣಿಯರಿಗಾಗಿಯೇ ಮೀಸಲಿರುವ ಒಂದು ಸ್ಪರ್ಧಾತ್ಮಕ ಕಾರ್ಯಕ್ರಮ. ಶ್ರೀ ಸಾಮಾನ್ಯ ಮಹಿಳೆಯೊಳಗಿನ ಪ್ರತಿಭೆ, ಸಾಮರ್ಥ್ಯ, ವ್ಯಕ್ತಿತ್ವ, ಬೌದ್ಧಿಕತೆಗಳನ್ನೆಲ್ಲಾ ಗುರುತಿಸಿ, ಗೌರವಿಸುವ ಜೀ ಕನ್ನಡದ ವಿನೂತನ ಪ್ರಯತ್ನವೇ ಶ್ರೀಮತಿ ಕರ್ನಾಟಕ. ಇಂತಹ ಪ್ರಯತ್ನ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪ್ರಪ್ರಥಮ.


ಗ್ರಹಿಣಿಯರೊಳಗಿನ ಅಂತ:ಸತ್ವ, ಕೇವಲ ಮನೆ - ಮಕ್ಕಳ ನಡುವೆ ಕಳೆದು ಹೋಗಬಾರದು ಹಾಗೂ ಎಲ್ಲಾ ಅವಕಾಶಗಳು ಕೇವಲ ನಗರದ ಮಹಿಳೆಯರಿಗೇ ಸೀಮಿತವಾಗಬಾರದೆಂದೇ ಕರುನಾಡ ಮಹಿಳೆಯರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮ "ಶ್ರೀಮತಿ ಕರ್ನಾಟಕ".


ನುರಿತ ನಿರ್ಣಾಯಕರ ಜೊತೆಗೆ ಸ್ಥಳೀಯ ಪ್ರತಿಷ್ಠಿತ ವ್ಯಕ್ತಿಗಳ ನೆರವಿನಿಂದ ರಾಜ್ಯದ ನಾಲ್ಕು ಪ್ರಮುಖ ನಗರಗಳಲ್ಲಿ ಮೊದಲನೆ ಸುತ್ತಿನ ಆರಂಭಿಕ ಆಯ್ಕೆ ನಡೆಯಿತು. ಮೈಸೂರು, ಹುಬ್ಬಳ್ಳಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮೊದಲ ಹಂತದ ಆಯ್ಕೆ ಸಪ್ಟೆಂಬರ್ ೧೭, ೨೦೦೭ರಂದು ಪ್ರಾರಂಭವಾಯಿತು.


ಮಹಿಳೆಯ ಬಹುಮುಖ ಪ್ರದರ್ಶನವು ಹಣಕಾಸು ನಿರ್ವಹಣೆ, ಕಲಾಭಿರುಚಿ, ದೈಹಿಕ ಸಾಮರ್ಥ್ಯ, ಆರೋಗ್ಯದ ಅರಿವು, ಮಕ್ಕಳ ಪಾಲನೆ - ಪೋಷಣೆ, ಸಹನೆ ಪರೀಕ್ಷೆ, ಮನೆ ಅಂದಗೊಳಿಸುವ ಬಗೆ, ಅಡುಗೆ ವಿಧಾನ, ಸಮಯ ಪಾಲನೆ, ಹೊಂದಾಣಿಕೆಯ ಸ್ವಭಾವ, ಸೌಂದರ್ಯದ ಅರಿವು, ಇತರರನ್ನು ಮನ ಒಲಿಸುವ ತಾಕತ್ತು.. ಹೀಗೆ ಹಲವು ವಿಚಾರಗಳ ಕುರಿತು ಸ್ಪರ್ದಿಗಳ ಸಾಮರ್ಥ್ಯ ಪರೀಕ್ಷೆ ಎಲ್ಲಾ ಇದೆ. ಸ್ಪರ್ಧೆಗಳು ಆಟದಂತೆ ಮನೋರಂಜಕವಾಗಿರುವುದು ಇಲ್ಲಿನ ಪ್ರಮುಖ ವಿಶೇಷ.


ವೈಯುಕ್ತಿಕ ಮತ್ತು ವ್ರತ್ತಿ ಜೀವನದಲ್ಲಿ ಸಮಾನ ಸಾಧನೆ ಮಾಡಿರುವ, ಸ್ವತ: ಉತ್ತಮ ಗ್ರಹಿಣಿಯಾಗಿರುವ ನಟಿ ಶ್ರೀಮತಿ ಅನು ಪ್ರಭಾಕರ್ ಈ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ.