ನಾಗಪುರ

From Wikipedia

ನಾಗಪುರ ಮಹಾರಾಷ್ಟ್ರ ರಾಜ್ಯದ ಉಪರಾಜಧಾನಿ. ಇದು ರಾಜ್ಯದ ಮೂರನೆಯ ಮತ್ತು ಭಾರತ ದಲ್ಲಿ ಹದಿಮೂರನೆಯ ಅತಿ ದೊಡ್ಡ ನಗರ. ಪ್ರದೇಶ (urban conglomeration). . ಮಹಾರಾಷ್ಟ್ರ ದ ವಿದರ್ಭ ವಿಭಾಗದ ಅತಿ ದೊಡ್ಡ ನಗರ ಹಾಗೂ ನಾಗಪುರ ಜಿಲ್ಲೆಯ ಜಿಲ್ಲಾಕೇಂದ್ರವೂ ಇದಾಗಿದೆ. ಮಹಾರಾಷ್ಟ್ರವಿಧಾನಮಂಡಲದ ಚಳಿಗಾಲದ ಅಧಿವೇಶನ ಇಲ್ಲಿ ನಡೆಯುತ್ತದೆ. ಸರಿಸುಮಾರು ಭಾರತ ದ ಮಧ್ಯಭಾಗದಲ್ಲಿರುವ ಇಲ್ಲಿ ಭಾರತ ದ ಸೊನ್ನೆ ಮೈಲಿಕಲ್ಲನ್ನು ನೋಡಬಹುದು. ಇಲ್ಲಯ ಹೆಸರುವಾಸಿ ಕಿತ್ತಲೆಹಣ್ಣುಗಳಿಂದಾಗಿ ಇದನ್ನು ಕಿತ್ತಲೆಹಣ್ಣುಗಳ ನಗರ ಎಂದೂ ಸಂಬೋಧಿಸಲಾಗುತ್ತದೆ. ಈ ನಗರದ 300ನೆಯ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು.

[ಬದಲಾಯಿಸಿ] ಭೂಗೋಲ ಮತ್ತು ಹವಾಮಾನ

220 ಚದರ ಕಿ.ಮೀ. ವಿಸ್ತೀರ್ಣದ ನಾಗಪುರ ಸಮುದ್ರಮಟ್ಟದಿಂದ 310 ಮೀಟರ್ ಎತ್ತರದಲ್ಲಿದೆ. ಸಮುದ್ರದಿಂದ ಅತಿ ದೂರದಲ್ಲಿರು ಕಾರಣ ಇಲ್ಲಿ ಸಾಧಾರಣವಾಗಿ ಶುಷ್ಕ ಹವೆಯಿದ್ದು, ತಾಪಮಾನವೂ ಹೆಚ್ಚಿರುತ್ತದೆ. ವರ್ಷಕ್ಕೆ ಸರಾಸರಿ 1205 ಮಿ.ಮೀಟರ್ ಮಳೆಯಾಗುತ್ತದೆ.

ಮಳೆಗಾಲ ಜೂನ್- ಸೆಪ್ಟೆಂಬರ್ ಅವಧಿಯಲ್ಲಿದ್ದು, ಮಾರ್ಚ್ ನಿಂದ ಜೂನ್ ವರೆಗೆ ಬೇಸಿಗೆಯಿರುತ್ತದೆ. ಬೇಸಿಗೆಯ ಝಳ ಮೇ ತಿಂಗಳಿನಲ್ಲಿ ಅತಿ ಹೆಚ್ಚಿರುತ್ತದೆ. ಈ ತಿಂಗಳಿನಲ್ಲಿ ತಾಪಮಾನ 40 ಡಿಗ್ರಿ ಸೆಂಟಿಗ್ರೇಡ್ ವರೆಗೂ ಹೋಗುವುದುಂಟು. ನವೆಂಬರ್ಜನವರಿ ಅವಧಿಯಲ್ಲಿ ಚಳಿಗಾಲವಿದ್ದು , ಆಗ ಕನಿಷ್ಟ ಉಷ್ಣಾಂಶ 10 ಡಿಗ್ರಿ ಸೆಂಟಿಗ್ರೇಡ್ ವರೆಗೂ ಕುಸಿಯುತ್ತದೆ.

[ಬದಲಾಯಿಸಿ] ಇತಿಹಾಸ

10ನೆಯ ಶತಮಾನದ ತಾಮ್ರಪಟವೊಂದರಲ್ಲಿ ನಾಗಪುರದ ಮೊಟ್ಟಮೊದಲ ಉಲ್ಲೇಖ ದೊರೆಯುತ್ತದೆ. ಕ್ರಿ.ಶ. 940ರ ಈ ತಾಮ್ರಪಟವು ವರ್ಧಾ ಪ್ರದೇಶದ ದೇವಾಳೀ ಎಂಬಲ್ಲಿ ಸಿಕ್ಕಿದೆ.ಛಿಂದವಡಾ ಜಿಲ್ಲೆಯಲ್ಲಿಯ ದೇವಗಡದ ರಾಜ ಬಖ್ತ್ ಬುಲಂದ್ ಶಹಾನು 1702ರಲ್ಲಿ ನಾಗನದಿಯ ದಂಡೆಯಮೇಲೆ ನಾಗಪುರ ನಗರವನ್ನು ಸ್ಥಾಪಿಸಿದನು. ಆಗಿನ ದೇವಗಡ ರಾಜ್ಯದಲ್ಲಿ ನಾಗಪುರ, ಸಿವಾನಿ, ಬಾಲಾಘಾಟ್, ಬೈತೂಲ್ ಮತ್ತು ಹೋಶಂಗಾಬಾದ್ ಪ್ರದೇಶಗಳು ಸಮಾವೇಶವಾಗಿದ್ದವು. ಬಖ್ತ್ ಬುಲಂದ್ ಶಹಾನ ನಂತರ ಅವನ ಮಗ ರಾಜಾ ಚಾಂದ್ ಸುಲ್ತಾನ್ ಸಿಂಹಾಸನವೇರಿದ. ಇವನ ಕಾಲದಲ್ಲಿಯೇ, 1706ರಲ್ಲಿ, ನಾಗಪುರ ರಾಜಧಾನಿಯಾಯಿತು. ಮುಂದಿನ 33 ವರ್ಷಗಳ ಅವನ ಆಡಳಿತದಲ್ಲಿ ನಾಗಪುರ ಭರದಿಂದ ಬೆಳೆಯಿತು. ರಾಜಾ ಚಾಂದ್ ಸುಲ್ತಾನನ ನಂತರ ನಾಗಪುರ ಭೋಂಸಲೇ ರಾಜವಂಶದ ಸುಪರ್ದಿಗೆ ಬಂದಿತು. 1742ರಲ್ಲಿ ರಘೂಜೀರಾಜೇ ಭೋಂಸಲೇ ಸಿಂಹಾಸನವೇರಿದನು. 1817ರಲ್ಲಿ ಸೀತಾಬರ್ಡಿಯ ಯುದ್ಧದಲ್ಲಿ ಮರಾಠರನ್ನು ಸೋಲಿಸಿದ ಬ್ರಿಟಿಷರು ನಾಗಪುರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1861ರಲ್ಲಿ ಇದು ಸೆಂಟ್ರಲ್ ಪ್ರಾವಿನ್ಸ್ ಮತ್ತು ಬೆರಾರ್ ಪ್ರಾಂತದ ರಾಜಧಾನಿಯಾಯಿತು.


1867ರಲ್ಲಿ ನಾಗಪುರದಿಂದ ಮುಂಬಯಿವರೆಗೆ ರೈಲುಮಾರ್ಗವನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲಾ ಕಂಪನಿಯು ನಿರ್ಮಿಸಿತು. ಈ ಹಳಿಗಳ ಮೇಲೆ ನಾಗಪುರದಿಂದ ಹೊರಟ ಮೊದಲ ರೈಲು ಓಡಿದ್ದು ಅದೇ ವರ್ಷದಲ್ಲಿ. ಟಾಟಾ ಉದ್ಯೋಗಸಮೂಹದ ಸ್ಥಾಪಕ ಜಮಶೇಟಜೀ ಟಾಟಾ ದೇಶದ ಮೊಟ್ಟಮೊದಲ ಬಟ್ಟೆ ಗಿರಣಿಯನ್ನು ನಾಗಪುರದಲ್ಲಿ ಸ್ಥಾಪಿಸಿದರು.


ಭಾರತದ ಸ್ವಾತಂತ್ರಚಳುವಳಿಯಲ್ಲಿಯೂ ಈ ನಗರ ಮಹತ್ವದ ಪಾತ್ರ ವಹಿಸಿದೆ.ಸ್ವಾತಂತ್ರ ಪೂರ್ವದಲ್ಲಿ ಕಾಂಗ್ರೆಸ್ಸಿನ ಎರಡು ಅಧಿವೇಶನಗಳು ಇಲ್ಲಿ ಜರುಗಿದ್ದವು. ಅಸಹಕಾರ ಚಳುವಳಿಯ ಘೋಷಣೆಯಾಗಿದ್ದು 1920ರ ನಾಗಪುರ ಅಧಿವೇಶನದಲ್ಲಿ. ಸ್ವಾತಂತ್ರ್ಯಾನಂತರ ಸೆಂಟ್ರಲ್ ಪ್ರಾವಿನ್ಸ್ ಮತ್ತು ಬೆರಾರ್ ಪ್ರದೇಶಗಳನ್ನು ಒಟ್ಟುಗೂಡಿಸಿ ನಾಗಪುರವನ್ನು ಅದರ ರಾಜಧಾನಿಯನ್ನಾಗಿ ಮಾಡಲಾಯಿತು. 1950ರಲ್ಲಿ ಮಧ್ಯ ಪ್ರದೇಶ ರಾಜ್ಯದ ಸ್ಥಾಪನೆಯಾಗಿ, ನಾಗಪುರ ಅದರ ರಾಜಧಾನಿಯಾಯಿತು. 1956ರಲ್ಲಿ ರಾಜ್ಯ ಪುನರ್ರಚನಾ ಆಯೋಗವು ನಾಗಪುರವೂ ಸೇರಿದಂತೆ , ಬೆರಾರ್ (ವರ್ಹಾಡ್) ಪ್ರದೇಶವನ್ನು ಆಗಿನ ಬಾಂಬೆ (ಇಂದಿನ ಮಹಾರಾಷ್ಟ್ರ )ರಾಜ್ಯದಲ್ಲಿ ವಿಲೀನಗೊಳಿಸಿತು. ದೇಶದ ಭೌಗೋಲಿಕ ಸುರಕ್ಶಿತತೆಯ ದೃಷ್ಟಿಯಿಂದ , ನಾಗಪುರವನ್ನು ಭಾರತದ ರಾಜಧಾನಿಯಾಗಿ ಬದಲಾಯಿಸುವ ಪ್ರಸ್ತಾವವೂ ಇತ್ತು. ಮಹಾರಾಷ್ಟ್ರ ದ ಉಪರಾಜಧಾನಿಯಾಗಿರುವ ನಾಗಪುರದಲ್ಲಿ ವಿಧಾನಮಂಡಳದ ಚಳಿಗಾಲದ ಅಧಿವೇಶನ ನಡೆಯುತ್ತದೆ.

1956ರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು.

[ಬದಲಾಯಿಸಿ] ನಾಗಪುರದ ಹೆಸರುವಾಸಿ ಸಂಸ್ಥೆಗಳು

ನಾಗಪುರ ಮಹಾರಾಷ್ಟ್ರದ ಉಪರಾಜಧಾನಿಯಾದ ಕಾರಣ ವರ್ಷದಲ್ಲಿ ಸುಮಾರು ಎರಡುವಾರದ ಅವಧಿಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಲ್ಲಿಯೇ ನಡೆಯುತ್ತದೆ. ಮುಂಬಯಿಯ ಉಚ್ಚನ್ಯಾಯಾಲಯದ ಪೀಠವೊಂದು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾದದ್ದು ನಾಗಪುರದಲ್ಲಿ. ಇದರ ಮುಖ್ಯ ಕಾರ್ಯಾಲಯ ಇಲ್ಲಿಯೇ ಇದೆ.

ನಾಗಪುರ ಅನೇಕ ರಾಷ್ಟ್ರೀಯ ಮಟ್ಟದ ಸರಕಾರೀ ವೈಜ್ಞಾನಿಕ ಸಂಸ್ಥೆಗಳಿವೆ. ರಾಷ್ಟ್ರೀಯ ಪರ್ಯಾವರಣ ಇಂಜಿನಿಯರಿಂಗ್ ಸಂಸ್ಥೆ (NEERI) ,ಕೇಂದ್ರ ಹತ್ತಿ ಸಂಶೋಧನಾ ಸಂಸ್ಥೆ (CICR) ,ರಾಷ್ಟ್ರೀಯ ಕಿತ್ತಳೆ (?) (Citrus) ಸಂಶೋಧನಾ ಸಂಸ್ಥೆ, , ಭೂಮಿ ಸರ್ವೇಕ್ಷಣ ಮತ್ತು ಉಪಯೋಗದ ರಾಷ್ಡ್ರೀಯ ಬ್ಯೂರೋ, ಜವಹರಲಾಲ್ ನೆಹರೂ ರಾಷ್ಟ್ರೀಯ ಅಲ್ಯುಮಿನಿಯಮ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ,, ಭಾರತೀಯ ಗಣಿಗಾರಿಕಾ ಬ್ಯೂರೋ, ಇತ್ಯಾದಿ.

ನಾಗಪುರ ಭಾರತೀಯ ಸೇನೆ ಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಭಾರತೀಯ ವಾಯುಸೇನೆಯ ಮುಖ್ಯ ದುರಸ್ತಿ ಕಾರ್ಯಾಲಯ ನಾಗಪುರದಲ್ಲಿದೆ..ಅಷ್ಟೇ ಅಲ್ಲ, ಸಿಬ್ಬಂದಿ ಕಾಲೇಜು, दारुगोळा कारखाना ಇವೂ ಇಲ್ಲಿವೆ.ಭಾರತೀಯ ಸೇನಾದಳದ ರೆಜಿಮೆಂಟ್ ಸೆಂಟರ್ ಆಫ್ ಇಂಡಿಯನ್ ಆರ್ಮಿ ಬ್ರಿಗೇಡ್ ಗಾಗಿ ಕಟ್ಟಿರುವ ಮಿಲಿಟರಿ ಸಂಸ್ಥೆ (Cantonment Board) ಕಾಂಪ್ಟೀ (Kamptee) ಉಪನಗರದಲ್ಲಿದೆ.ಮಿಲಿಟರಿಯ ಅಧೀನದಲ್ಲಿ NCC Officer’s Training School, Institute of Military Law ಇತ್ಯಾದಿ ಅನೇಕ ಸಂಸ್ಥೆಗಳೂ ಇವೆ. ಇಲ್ಲಿಯ ನಾಗರೀಕ ಸಂರಕ್ಷಣಾ ಕಾಲೇಜು ( Civil Defense College) ಭಾರತ ಮತ್ತು ಹೊರಗಿನ ಅನೇಕ ವಿದ್ಯಾರ್ಥಿಗಳಿಗೆ ನಾಗರೀಕ ಸಂರಕ್ಷಣೆಯ ತರಬೇತಿ ನೀಡುತ್ತದೆ.

ದೇಶದ ಮಧ್ಯಭಾಗದಲ್ಲಿರುವುದರಿಂದ ನಾಗಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಶೂನ್ಯ ಮೈಲಿಕಲ್ಲಿನಿಂದ (.zero milestone) ದೇಶದ ಎಲ್ಲಾ ಪ್ರದೇಶಗಳ ಅಧಿಕೃತ ದೂರದ ಗಣನೆ ಮಾಡಲಾಗುತ್ತದೆ.



ಚಿತ್ರ:Orange Nagpur.jpg
An Orange farm on the outskirts of Nagpur city



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.