ದೇವೇಂದ್ರಕುಮಾರ ಹಕಾರಿ
From Wikipedia
ದೇವೇಂದ್ರಕುಮಾರ ಹಕಾರಿಯವರು ೧೯೩೧ರಲ್ಲಿ ರಾಯಚೂರು ಜಿಲ್ಲೆಯ ಚಿಕ್ಕೇನಕೊಪ್ಪ ಗ್ರಾಮದಲ್ಲಿ ಜನಿಸಿದರು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಏ ಮತ್ತು ಎಮ್.ಏ. ಪದವಿ ಪಡೆದ ನಂತರ "ಜಾನಪದ ಸಾಮಾಜಿಕ ದುಃಖಾಂತ ಕಥನ ಗೀತೆಗಳು:ಒಂದು ಅಧ್ಯಯನ"ವೆನ್ನುವ ಮಹಾಪ್ರಬಂಧವನ್ನು ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು.
[ಬದಲಾಯಿಸಿ] ಹೋರಾಟ
ಭಾರತವು ಸ್ವಾತಂತ್ರ್ಯ ಪಡೆದಾಗ ಹೈದರಾಬಾದ ಸಂಸ್ಥಾನದಲ್ಲಿ ರಜಾಕಾರರ ಹಾವಳಿ ನಡೆದಾಗ ಇವರು ಅನ್ನದಾನಯ್ಯ ಪುರಾಣಿಕರವರ ನಾಯಕತ್ವದಲ್ಲಿ, ಹೈದರಾಬಾದಿನಲ್ಲಿ ಕಾಲೇಜು ತೊರೆದು ಮುಂಡರಗಿಯ ಶಿಬಿರವನ್ನು ಸೇರಿದರು. ಈ ಶಿಬಿರದ ಓರ್ವ ಕಾರ್ಯಕರ್ತನಾಗಿ ಇವರು ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ರಜಾಕಾರರ ವಿರುದ್ಧ ಹೋರಾಡಿದ್ದಾರೆ.( ಉಲ್ಲೇಖ: ವಿಮೋಚನೆ ಪುಸ್ತಕದಲ್ಲಿ ಇವರು ಬರೆದಿರುವ ಲೇಖನ).
[ಬದಲಾಯಿಸಿ] ಉದ್ಯೋಗ
೧೯೫೮ರಿಂದ ೧೯೬೯ರವರೆಗೆ ಕಲಬುರ್ಗಿಯ ಶರಣಬಸವೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ೧೯೯೧ರವರೆಗೆ ಕರ್ನಾಟಕ ಮಹಾವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.ನಿವೃತ್ತಿಯ ನಂತರ ಧಾರವಾಡದ ಶ್ರೀನಗರದಲ್ಲಿ ನೆಲೆಸಿದ್ದರು.
ಇದಲ್ಲದೆ ಆಕಾಶವಾಣಿಯ ಸಲಹೆಗಾರರಾಗಿ ಹಾಗು ಜಾನಪದ ಅಕಾಡೆಮಿಯ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ತ್ರಿವೇಂದ್ರಮ್ದಲ್ಲಿರುವ "ದ್ರಾವಿಡ ಭಾಷಾ ವಿಜ್ಞಾನ ಕೇಂದ್ರ"ದ ಆವರೆಅಣದಲ್ಲಿ ರೂಪುಗೊಂಡಿರುವ "ದಕ್ಷಿಣ ಭಾರತೀಯ ಭಾಷಾ ಜಾನಪದ ಸಂಸ್ಥೆ"ಯ ಸ್ಥಾಪಕರು ಹಾಗು ಉಪಾಧ್ಯಕ್ಷರಾಗಿದ್ದರು.
[ಬದಲಾಯಿಸಿ] ಕೃತಿಗಳು
ಹಕಾರಿಯವರ ಕೃತಿಗಳು ಇಂತಿವೆ:
[ಬದಲಾಯಿಸಿ] ಕವನ
- ಚಿನ್ಮಯಿ
- ಆಚೆ-ಈಚೆ
- ಬಿಡುಗಡೆ
- ನನ್ನ ಸುತ್ತ
[ಬದಲಾಯಿಸಿ] ನಾಟಕಗಳು
- ಅಮೃತಮತಿ
- ಶಾಕುಂತಲಾ
- ಕ್ಷಿತಿಜದಾಚೆ
[ಬದಲಾಯಿಸಿ] ಕಾದಂಬರಿಗಳು
- ಕೂಗುತಿವೆ ಕಲ್ಲು
- ಚೆಲ್ವ ಕೋಗಿಲೆ
[ಬದಲಾಯಿಸಿ] ಕಥಾ ಸಂಕಲನ
- ಚಾಟಿ
- ಒರೆಗಲ್ಲು
[ಬದಲಾಯಿಸಿ] ಚರಿತ್ರೆ
- ಆರದ ದೀಪ
- ಶಿರಸಂಗಿ ಲಿಂಗರಾಜರು
- ಮೈಲಾರ ಬಸವಲಿಂಗ ಶರಣರು
- ಆಲೂರು ವೆಂಕಟರಾಯರು
- ನೀಲಕಂಠ ಬುವಾ
- ದಿ. ಚಂದ್ರಶೇಖರ ಪಾಟೀಲ
- ನಾಗಚಂದ್ರ
- ಮಾದಾರ ಚನ್ನಯ್ಯ
- ನೇಮಿಚಂದ್ರ
- ಮೋಳಿಗೆಯ ಮಾರಯ್ಯ
[ಬದಲಾಯಿಸಿ] ವಿಮರ್ಶೆ
- ಸಾಹಿತ್ಯ ಸಮ್ಮುಖ
- ಕನ್ನಡ ಕಾವ್ಯಗಳಲ್ಲಿ ಕಿರಾತಾರ್ಜುನೀಯ
[ಬದಲಾಯಿಸಿ] ಜಾನಪದ
- ಜಾನಪದೀಯ
- ಗರತಿಯ ಹಾಡುಗಳಲ್ಲಿ ಕೌಟುಂಬಿಕ ಜೀವನ ಚಿತ್ರಣ
- ಜಾನಪದ ಮೂಲಭೂತ ತತ್ವಗಳು
- ಜಾನಪದ ಸಮ್ಮುಖ
- ಜಾನಪದ ಭಂಡಾರ
[ಬದಲಾಯಿಸಿ] ಸಂಪಾದನೆ
- ಬಸವರಾಜದೇವರ ರಗಳೆ
- ಕಾಯಕದ ಐದು ರಗಳೆಗಳು
- ನಾಟಕ ತ್ರಿದಲ
- ಸಣ್ಣ ಕತೆಗಳು
- ವಿಜಯ ಕಲ್ಯಾಣನಗರಿ(ಡಾ.ಜವಳಿಯವರ ಜೊತೆಗೆ)
- ಅಕಾಡೆಮಿ ೧೯೮೯ರ ಕನ್ನಡ ಕಾವ್ಯ
[ಬದಲಾಯಿಸಿ] ಅನುವಾದ
- ಉರ್ದು ಸಾಹಿತ್ಯ ಚರಿತ್ರೆ
- ದಸ್ ಸ್ಪೇಕ್ ಬಸವ
[ಬದಲಾಯಿಸಿ] ಗೌರವ ಹಾಗು ಪ್ರಶಸ್ತಿ
ಜಾನಪದ ತಜ್ಞ, ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ.
೧೯೯೩ರಲ್ಲಿ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಲ್ಲದೆ,೧೯೯೩ರಲ್ಲಿ ನಡೆದ ೬೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷರಾಗಿದ್ದರು.