ಸಂಪ್ರದಾಯಗಳಹಾಡಿನ ರಾಧಮ್ಮನವರು
From Wikipedia
ಪರಿವಿಡಿ |
[ಬದಲಾಯಿಸಿ] ಜನನ, ಮತ್ತು ಬಾಲ್ಯ :
ಶ್ರೀಮತಿ. ರಾಧಮ್ಮನವರು, ಬೆಂಗಳೂರಿನ ಹತ್ತಿರದಲ್ಲಿರುವ, ದೇವನಹಳ್ಳಿಯಲ್ಲಿ, ಆಯಿತುವಾರ, ೧೮, ಆಗಸ್ಟ್, ೧೯೦೮ ರಲ್ಲಿ ಹುಟ್ಟಿದರು. ( ಕೀಲಕ ಸಂವತ್ಸರದ ಶ್ರಾವಣ ಬಹುಳ ಪಂಚಮಿ, ರವಿವಾರ) ಅವರ ತಂದೆ, ಶ್ರೀ. ಅಶ್ವತ್ಥನಾರಾಯಣರಾಯರು. ತಾಯಿ, ಮಹಾಸಾಧ್ವಿ, ಶ್ರೀಮತಿ. ತಿಮ್ಮಮ್ಮನವರು. ಇವರು ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದರು. ಪ್ರಾಥಮಿಕಶಾಲೆಯ ಹಂತದಲ್ಲಿ, ಅವರು, ಬೆಂಗಳೂರಿನ ಕಾನ್ವೆಂಟ್ ಶಾಲೆಗೆ ಹೋಗುತ್ತಿದ್ದರು. ಇವರ ವಿವಾಹ, ಹೊಳಲ್ಕೆರೆಯ, ಶ್ಯಾನುಭೋಗರ ಮಗ, ಶ್ರೀ ಎಚ್. ವಿ. ರಂಗರಾಯರ ಜೊತೆ ನಡೆಯಿತು.
[ಬದಲಾಯಿಸಿ] ಸಂಪ್ರದಾಯಗಳ ಹಾಡಿನ ಬಗ್ಗೆ ಒಲವು :
ರಾಧಮ್ಮನವರು, ಸಂಪ್ರದಾಯದ ಹಾಡುಗಳನ್ನು ಹೇಳುವುದರಲ್ಲಿ ಎತ್ತಿದ ಕೈ. ಅತ್ತುತ್ತಮವಾದ ಕಂಠಶ್ರಿ, ಉಚ್ಚಾರಣೆ, ಇದಲ್ಲದೆ, ಅದ್ಭುತ ಜ್ಞಾಪಕಶಕ್ತಿಗಳಿಂದ, ಎಲ್ಲರಿಗೂ ವಿಸ್ಮಯವಾಗುವರೀತಿಯಲ್ಲಿ, ಮನೆಯಲ್ಲಿ ಜರುಗುವ, ನಾಮಕರಣ, ಅನ್ನಪ್ರಾಷನ, ಮುಂಜಿ, ಮದುವೆ, ಬೀಗರನ್ನು ಕರೆಯುವ ಹಾಡು ಪ್ರಸಿದ್ದ. ಪ್ರಸ್ತ, ಸೀಮಂತ, ಇತ್ಯಾದಿಗಳನ್ನು ಎಲ್ಲಿ ಕೇಳಿದರೂ ತಕ್ಷಣ ಸೊಗಸಾಗಿ ಹೇಳಿಬಿಡುತ್ತಿದ್ದರು. ಎಂದೂ ಕೀರ್ತನೆಗಳಿಗಾಗಿ ಪುಸ್ತಕಗಳನ್ನು ಹುಡುಕಿದವರೇ ಅಲ್ಲ. ಅವರ ಹಾಡಿನ ಪುಸ್ತಕದಲ್ಲಿ, (ಸೆಪ್ಟೆಂಬರ್, ೧೩, ೧೯೩೫ ರಲ್ಲಿ ಬರೆದಿದ್ದ ಅವರ "ನಳಚರಿತ್ರೆ," ಎಂಬ ಹಾಡಿನ ಪುಸ್ತಕದಲ್ಲಿ ಹಲವಾರು ಹಾಡುಗಳನ್ನು ದಾಖಲಿಸಿದ್ದಾರೆ. ಅದು ಈಗಲೂ ಅವರ ಮಕ್ಕಳ ಮನೆಯಲ್ಲಿ ಇದೆ.)
[ಬದಲಾಯಿಸಿ] ನಳಚರಿತ್ರೆಯ ಪುಸ್ತಕ :
"ನಳಚರಿತ್ರೆ", ರಾಧಮ್ಮನವರ ಕಾಲದಲ್ಲಿ ಬಹಳ ಪ್ರಚಾರದಲ್ಲಿತ್ತಂತೆ. ಅಂತಹ ಅನೇಕ ಹಾಡಿನ ಸಂಗ್ರಹಗಳಲ್ಲಿ ಇದೂ ಪ್ರಮುಖವೆಂದು ಅವರು ಹೇಳುತ್ತಿದ್ದದ್ದನ್ನು, ಅವರ ಮಕ್ಕಳು ಮತ್ತು ಸೊಸೆಯರು ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ. ನಳಚರಿತ್ರೆಯಲ್ಲಿ, ಮೊದಲಭಾಗ, ರಾಗ ; ಎರಡನೆಯದು, ವಚನ. ಒಟ್ಟು ೧೦೦ ಪದ್ಯಗಳಿವೆ. "ಉಮೆಯಸುತನಾ ಚರಣಕಮಲಕೆ, ನಮಿಸಿ" ಎಂದು ಆರಂಭವಾಗಿ, ನೂರನೆಯದು- ಕೊನೆಯ ಪದ್ಯ, " ಭೀಮೇಶಕೃಷ್ಣನ್ನ ಪಾಡಿ, ಆನಂದದಿಂ ಅಕ್ಷತೆಯನಿಟ್ಟುಹರಸುತಾಲಿ ". ಎಂದು ಮುಕ್ತಾಯವಾಗುತ್ತದೆ. ಇದು ನಳಚರಿತ್ರೆಯ ೧೦೦ ನೆಯ ಪದ್ಯ !
[ಬದಲಾಯಿಸಿ] ಅಗಾಧ ಜ್ಞಾಪಕ ಶಕ್ತಿ :
ಇಷ್ಟನ್ನೂ ರಾಧಮ್ಮನವರು ತಮ್ಮ ಜ್ಞಾಪಕಶಕ್ತಿಯಿಂದ ಅತ್ಯಂತ ಹರ್ಷದಿಂದ ಚಾಪೆಯಮೇಲೆ ಕುಳಿತುಕೊಂಡು, ಒಂದಾದ ಮೇಲೆ ಒಂದರಂತೆ, ಸ್ವಲ್ಪವೂ ತಡವರಿಸದೆ, ನಗುಮುಖದಿಂದ ಹಾಡಿದನಂತರ, ಮಂಗಳಾರತಿಯ ಹಾಡನ್ನು ಹೇಳಿ ಆರತಿ ಬೆಳಗಿದ ಮೇಲೆ, ಪೂಜೆ ಮುಕ್ತಾಯವಾಗುತ್ತಿತ್ತು. ಅಲ್ಲಿಯವವರೆಗೂ ಎಲ್ಲರೂ ಭಕ್ತಿಯಿಂದ ಅವರ ಹಾಡಿನಲ್ಲಿ ಮಗ್ನರಾಗುತ್ತಿದ್ದರು. ಮಧ್ಯೆ, ನಳಮಹರಾಯನ ಅವಸ್ಥೆ, ಪರದಾಟಗಳನ್ನೂ, ದಮಯಂತಿ ಆತನನ್ನು ಸಂತೈಸುವ ರೀತಿಯನ್ನೂ ಮನದಟ್ಟಾಗುವಂತೆ ಕನ್ನಡದಲ್ಲಿ ವಿವರಿಸುತ್ತಿದ್ದರು. ಅವರ ಮಂಗಳಾರತಿಯ ಹಾಡು (ಕೀರ್ತನೆ,) "ಶೇಷಶಯನ ಕೇಶವಗೆ, ಶುಭಮಂಗಳಂ, ವಾಸುಕಿ ಶಯನನಿಗೆ ಶುಭಂಗಳಂ" ಎನ್ನುವ ಹಾಡು ಸರ್ವರಿಗೂ ಅಚ್ಚುಮೆಚ್ಚಾದದ್ದು.
ರಾಧಮ್ಮವರ ಹಾಡಿನಗೀಳಿಗೆ ಸರಿಯಾಗಿ ಸ್ಪಂದಿಸುವ ಪತಿ, ರಂಗರಾಯರು. ರಾಧಮ್ಮನವರ ಹಾಡಿನ ಪುಸ್ತಕದಲ್ಲಿ, ರಾಯರೇ ತಮ್ಮ ಸ್ಫುಟವಾದ ಅಕ್ಷರಗಳಲ್ಲಿ ಎಲ್ಲಾ ಹಾಡುಗಳನ್ನೂ ಚೆನ್ನಾಗಿ ಬರೆದಿಟ್ಟಿದ್ದಾರೆ. ತಮ್ಮ ೪ ಜನ ಮಕ್ಕಳಿಗೆಲ್ಲ ತಲಾ ಒಂದೊಂದು ಪ್ರತಿಮಾಡಿಸಿ ಕೊಟ್ಟಿದ್ದಾರೆ. ಬೇರೆ ಎನೂ ಆಸ್ತಿಮಾಡಿರದಿದ್ದರೂ, ಇದೇ ನಮಗೆ ತಮ್ಮ ತಾಯಿ-ತಂದೆಯವರು ಕೊಟ್ಟ ಅಮೂಲ್ಯವಾದ ಸಂಪತ್ತು ಎನ್ನುತ್ತಾರೆ, ಅವರ ಮಕ್ಕಳು.
[ಬದಲಾಯಿಸಿ] ಬೇರೆ ಹಾಡುಗಳು :
ಡಿ. ರಾಧಮ್ಮನವರ ಪುಸ್ತಕದಲ್ಲಿ, ೫ ಶುಕ್ರವಾರದ ಹಾಡುಗಳು, ಬಾಣಂತಿಲೇಹ, ಮಾಡುವ ವಿಧಾನವನ್ನೂ ಬರೆದಿಟ್ಟಿದ್ದಾರೆ. ಆಗ ಈ ಲೇಹ, ಅತ್ಯಂತ ಬೇಡಿಕೆಯಲ್ಲಿತ್ತು. ಅವರಿಗೆ, ಕನ್ನಡಲ್ಲಿ ದಾಸರಕೀರ್ತನೆಗಳು, ತೆಲುಗಿನಲ್ಲಿ, ತಮಿಳಿನಲ್ಲಿ, ಕೀರ್ತನೆಗಳು, ಹಿಂದೂಸ್ಥಾನಿ ಮತ್ತು ಮರಾಠಿಭಕ್ತಿಸಂಗೀತ್, ಮರಾಠಿ ರಂಗಭೂಮಿಯ ಹಾಡುಗಳು ಬರುತ್ತಿತ್ತು.
[ಬದಲಾಯಿಸಿ] ಮನೆಯಲ್ಲಿ ದೊರೆಕಿದ ಎಚ್. ಎಮ್. ವಿ. ಧ್ವನಿಮುದ್ರಿಕೆಗಳು :
ಗಾದೆಗಳನ್ನು ಆಗಿನಕಾಲದಜನರು, ತಮ್ಮ ಪ್ರತಿದಿನದ ಜೀವನದಲ್ಲಿ ಉಪಯೋಗಮಾಡುತ್ತಿದ್ದರಿಂದ, ರಾಧಮ್ಮನವರಿಗೂ ಅದೇ ರೂಢಿಯಾಗಿತ್ತು. ಮಾತು-ಮಾತಿಗೂ ಅವರು, ಗಾದೆಗಳು, ಉಪಮೆಗಳು, ಪ್ರಸಂಗಗಳನ್ನು ಜ್ಞಾಪಿಸಿಕೊಂಡು, ಹೇಳುತ್ತಿದ್ದದ್ದನ್ನು ಇಂದಿಗೂ ಅವರ ಸೊಸೆ ಮಕ್ಕಳು ಜ್ಞಾಪಿಸಿಕೊಳ್ಳುತ್ತಾರೆ. ತಮ್ಮ ಮನೆಯಲ್ಲಿ, ೧೯೩೫ ನೆಯ ಇಸವಿಯಲ್ಲೇ ಧ್ವನಿಮುದ್ರಿಕೆಗಳು ಇದ್ದವು. ರೆಕಾರ್ಡ್ ಹಚ್ಚಿದಾಗ, ಅದರ ಜೊತೆಜೊತೆಯಾಗಿ ಪ್ರತಿದಿನ ಹಾಡಿ, ಅದು ಅವರಿಗೆ ಕಂಠಪಾಠವಾಗಿತ್ತು. ಈ ಕೆಳಗೆ ದಾಖಲಿಸಿದ ಎಲ್ಲಾ ಹಾಡುಗಳನ್ನೂ ಅವರು ನಿರರ್ಗಳವಾಗಿ ತಮ್ಮ ಮನೆಯಲ್ಲಿ ಮತ್ತು ಕೇಳಲು ಆಶಿಸಿದವರ ಬಳಿ ನಿಗರ್ವಿಗಳಾಗಿ ಹಾಡುತ್ತಿದ್ದರು.
[ಬದಲಾಯಿಸಿ] ಗ್ರಾಮಾಫೋನ್ ರೆಕಾರ್ಡಗಳು :
- ೧. ಕನ್ನಡ-೧೫,
- ೨. ತೆಲುಗುಮತ್ತು ತಮಿಳು- ೨೩
- ೩. ಸಂಸ್ಕೃತ/ ಇಂಗ್ಲೀಷ್-೬
- ೪. ಮರಾಠಿ/ಹಿಂದೂಸ್ತಾನಿ-೭೭
- ೫. ವಾದ್ಯವೃಂದದ ರೆಕಾರ್ಡಗಳು,-6
೧. ನಗುವ ಹಾಡು, ರೈಲ್ವೆ ಸ್ಟೇಷನ್ ನ ಶಬ್ದ. ೨. ಉಗಿಬಂಡಿಯ ಇಂಜಿನ್ ಮಾಡುವ ’ಚುಚುಚುಕು’ ಶಬ್ದ. ೩. ಚಾಯ್, ಚಾಯ್ , ಎಂದು ಟೀ ಮಾರುವ ಹುಡುಗರ, ಕೂಗು. ೪. ಗಾರ್ಡ್ ಶೀಟಿ ಹಾಕುವ ಶಬ್ದ ಇತ್ಯಾದಿ.೫. ಹವಾಯಿಜಹಾಜ್, ನೆಲದಿಂದ ಮೆಲಕ್ಕೇರುವವಾಗಿನ ಶಬ್ದ. ೬. ಹುಟ್ಟುಹಬ್ಬದ ಪಾರ್ಟಿಯಲ್ಲಿ ನಗುವ ಶಬ್ದ. ರೆಕಾರ್ಡ್ ಮುಗಿದಮೇಲೆ, " ಈ ಹಾಡುಹೇಳಿದವಳು, ನಾಗಮ್ಮ, ೧೨ ವರ್ಷದ ಬಾಲೆ, ಎನ್ನುವ ಮಾತೂ ಕೇಳಿಸುತ್ತಿತ್ತು.
[ಬದಲಾಯಿಸಿ] ಕೆಲವು ಅಪರೂಪದ ರೆಕಾರ್ಡ್ಗಳು : ಈ ಧ್ವನಿಮುದ್ರಿಕೆಗಳ ವಿವರಗಳನ್ನು ರಾಧಮ್ಮನವರ ಮಕ್ಕಳಬಳಿ ಪಡೆಯಬಹುದು.
- ೧. ಕೋದಂಡರಾಮಶರ್ಮರ "ಸಹಸ್ರಶೀರ್ಷ ಪುರುಷಸೂಕ್ತ ".
- ೨. "ರುದ್ರಂ ",- ಗೋಪಾಲಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಶಾಸ್ತ್ರಿ
- ೩. ಕಲ್ಯಾಣಮಧದಾಶೀರ್ವಾದ, "ಓಂ ನಮೋ ಭಾಗವತೇ ವಾಸುದೇವಾಯ "- ಕೃಷ್ಣರಾವ್ ಶಿಂಡೆ, ಭೈರವಿ ರಾಗ,
- ೪. ನಾದಬಿಂದು ಕಲಾದೀನ ನಮೋ- ಸುಬ್ಬಯ್ಯ ಭಾಗವತರ್, ತಮಿಳಿನಲ್ಲಿ, ಜಂಜೂಟಿರಾಗ.
- ೫. ಇಂಗ್ಲೀಷ್ ದುಂಡುಮೇಜಿನ ಸಮ್ಮೇಳನದಲ್ಲಿ ಲಂಡನ್ ನಲ್ಲಿ ಮಹಾತ್ವಗಾಂಧಿಯವರ ಭಾಷಣ,
- ೬. "ವಂದೇ ಮಾತರಂ "-ವಿಷ್ಣು ಪಂಥ್,
- ೭. "ಪತಿತಂ ದೀನೋದ್ಧರಣಂ "-ವಿಷ್ಣು ಪಂಥ್,