ಶಂಕರ ದಯಾಳ ಶರ್ಮ
From Wikipedia
ಜನ್ಮ ದಿನಾಂಕ: | ಆಗಸ್ಟ್ ೧೯ ೧೯೧೮ |
---|---|
ನಿಧನರಾದ ದಿನಾಂಕ: | ಡಿಸೆಂಬರ್ ೨೬ ೧೯೯೯ |
ಭಾರತದ ರಾಷ್ಟ್ರಪತಿಗಳು | |
ಅವಧಿಯ ಕ್ರಮಾಂಕ: | ೯ನೆ ರಾಷ್ಟ್ರಪತಿ |
ಅಧಿಕಾರ ವಹಿಸಿದ ದಿನಾಂಕ: | ಜುಲೈ ೨೫ ೧೯೯೨ |
ಅಧಿಕಾರ ತ್ಯಜಿಸಿದ ದಿನಾಂಕ: | ಜುಲೈ ೨೫ ೧೯೯೭ |
ಪುರ್ವಾಧಿಕಾರಿ: | ಆರ್ ವೆಂಕಟರಮನ್ |
ಉತ್ತರಾಧಿಕಾರಿ: | ಡಾ. ಕೆ ಆರ್ ನಾರಾಯಣನ್ |
ಶಂಕರ ದಯಾಳ ಶರ್ಮ(ಆಗಸ್ಟ್ ೧೯, ೧೯೧೮ - ಡಿಸೆಂಬರ್ ೨೬, ೧೯೯೯) ೧೯೯೨ರಿಂದ - ೧೯೯೭ರವರಗೆ ಭಾರತದ ರಾಷ್ಟ್ರಪತಿಯಾಗಿದ್ದರು.
[ಬದಲಾಯಿಸಿ] ರಾಜಕೀಯ ಜೀವನ
- ೧೯೪೦ರಲ್ಲಿ ರಾಜಕೀಯ ಪ್ರವೇಶ . ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯ.
- ೧೯೫೨ರಿಂದ ೧೯೫೬ರವರೆಗೆ ಮಧ್ಯಪ್ರದೇಶ ರಾಜ್ಯದಲ್ಲಿ ಮುಖ್ಯಮಂತ್ರಿ.
- ೧೯೭೨ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರು.
- ೧೯೭೪ರಿಂದ ೧೯೭೭ರವರೆಗೆ ಕೇಂದ್ರಸರ್ಕಾರದಲ್ಲಿ ವಾರ್ತಾಮಂತ್ರಿ.
- ೧೯೮೪ರಲ್ಲಿ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲ.
- ೧೯೮೫ರಲ್ಲಿ ಪಂಜಾಬ್ ರಾಜ್ಯದ ರಾಜ್ಯಪಾಲ.
- ೧೯೮೬ರಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ.
- ೧೯೮೭ರಲ್ಲಿ ಭಾರತದ ೮ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದರು.
- ೧೯೯೨ರಲ್ಲಿ ೯ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು.