ನಿರುಪಮಾ
From Wikipedia
ನಿರುಪಮಾ ಇವರು ೧೯೩೩ ಸಪ್ಟಂಬರ ೩೦ ರಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ಇವರ ತಾಯಿ ಸೀತಮ್ಮ; ತಂದೆ ಕೃಷ್ಣಾಚಾರ್ಯ. ತಂದೆ, ತಾಯಿ ಜೊತೆಗೆ ಆಂಧ್ರಪ್ರದೇಶಕ್ಕೆ ಹೋಗಬೇಕಾದುದರಿಂದ ಇವರ ಶಿಕ್ಷಣ ತೆಲುಗು ಭಾಷೆಯಲ್ಲಿ ಆಯಿತು. ಇವರ ಮದುವೆ ೧೯೪೯ರಲ್ಲಿ ರಾಮಚಂದ್ರರಾವ್ ಇವರ ಜೊತೆಗೆ ನಡೆಯಿತು.
[ಬದಲಾಯಿಸಿ] ಸಾಹಿತ್ಯಸೇವೆ
೧೯೬೩ರಲ್ಲಿ ಇವರ ಮೊದಲ ಕೃತಿ ಅಧಿಕಾರಿಗಳ ಆವಾಂತರ ಎನ್ನುವ ನಾಟಕ ಹೊರಬಂದಿತು. ಈವರೆಗೆ ೧೧೮ ಕೃತಿಗಳನ್ನು ಹೊರತಂದಿದ್ದಾರೆ. ಇವುಗಳಲ್ಲಿ ನಾಟಕಗಳಲ್ಲದೆ ಕಾದಂಬರಿ, ಕಥಾಸಂಕಲನ, ಜೀವನಚರಿತ್ರೆ, ಸಂಪಾದನೆ ಹಾಗು ಅನುವಾದಗಳು ಸೇರಿವೆ. ಮಹಿಳೆಯರಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ತಿಳಿಯಪಡಿಸುವ ಕಾನೂನಿನ ಕಕ್ಷೆಯಲ್ಲಿ ರಕ್ಷೆ ಎನ್ನುವ ಗ್ರಂಥವನ್ನೂ ಸಹ ಬರೆದಿದ್ದಾರೆ
ಇವರ ಅಮೃತ ಕಲಶ ಕಾದಂಬರಿ ಚಲನಚಿತ್ರವಾಗಿದೆ.
೧೯೭೫ರಲ್ಲಿ ಅಖಿಲ ಭಾರತದ ಕನ್ನಡ ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ ಟಿ.ಸುನಂದಮ್ಮ , ಲೀಲಾದೇವಿ ಆರ್.ಪ್ರಸಾದ ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ.
೧೯೭೯ರಲ್ಲಿ ಚಿ.ನ.ಮಂಗಳಾ, ಎಚ್.ಎಸ್.ಪಾರ್ವತಿ, ನಾಗಮಣಿ, ಟಿ.ಸುನಂದಮ್ಮ ಹಾಗು ಇತರ ಕೆಲವು ಲೇಖಕಿಯರ ಜೊತೆಗೂಡಿ ಕರ್ನಾಟಕ ಲೇಖಕಿಯರ ಸಂಘವನ್ನು ಸ್ಥಾಪಿಸಿದರು.
೧೯೮೫ರಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ರಚಿಸಿದರು. ಆ ಪರಿಷತ್ತಿಗೆ ನಿರುಪಮಾ ಅಧ್ಯಕ್ಷರು ಹಾಗು ಸೂರ್ಯನಾಥ ಕಾಮತ ಉಪಾಧ್ಯಕ್ಷರಾಗಿದ್ದರು. ೧೯೮೯ರಲ್ಲಿ ಭಾರತದ ಎಲ್ಲೆಡೆಯಿಂದ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜರುಗಿಸಿದರು.
ನಿರುಪಮಾ ಬರೆದ Indian Women through the Ages ಮಹಾಪ್ರಬಂಧಕ್ಕೆ ಕೋಲಕಾಟಾ ವಿಶ್ವವಿದ್ಯಾಲಯದಿಂದ [1] ಹಾಗು ಕೆನಡಾದ Montreal Universityಯಿಂದ [2] ಡಾಕ್ಟರೇಟ ಲಭಿಸಿದೆ.
ಸದ್ಯಕ್ಕೆ ನಿರುಪಮಾ ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.