ಸಂಸ
From Wikipedia
ಸಂಸ - ಕನ್ನಡದ ಸಾಹಿತಿಗಳಲ್ಲೊಬ್ಬರು.
ಸಂಸ ಅವರ ನಿಜವಾದ ಹೆಸರು ಏ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್. ತಂದೆ ನರಸಿಂಹ ಪಂಡಿತರು, ತಾಯಿ ಗೌರಮ್ಮ. ಹುಟ್ಟೂರು ಯಳಂದೂರು ತಾಲೂಕಿನ ಅಗರ. ಸಂಸರು ತಮ್ಮದೆ ಹೆಸರನ್ನು ಸ್ವಲ್ಪ ಬದಲಾಯಿಸಿ ತಮ್ಮ ಕೃತಿಗಳನ್ನು ಪ್ರಕಟಿಸುತ್ತಿದ್ದರು. ಒಂದು ಸಲ ವಿಗಡ ವಿಕ್ರಮರಾಯ ನಾಟಕಕ್ಕೆ “ಕಂಸ” ಎಂಬ ಕಾವ್ಯನಾಮದಿಂದ ಪ್ರಕಟಣೆಗೆ ನೀಡಿದಾಗ ಮುದ್ರಾರಾಕ್ಷಸನ ಕೃಪೆಯಿಂದ ಅದು “ಸಂಸ” ಎಂದಾಯಿತಂತೆ. ಆ ಹೆಸರೇ ಅವರ ಕಾವ್ಯನಾಮವಾಗಿ ಶಾಶ್ವತವಾಗಿ ಉಳಿದುಕೊಂಡಿತು.
ಸಂಸರು ಹೈಸ್ಕೂಲಿನ ಕೊನೆಯ ತರಗತಿಯಲ್ಲಿದ್ದಾಗಲೆ ‘ ಕೌಶಲ’ ಎನ್ನುವ ಬಂಗಾಳಿ ಶೈಲಿಯ ಕಾದಂಬರಿಯನ್ನು ರಚಿಸಿದ್ದರು. ಈ ಕಾದಂಬರಿ ೧೯೧೫ ರಲ್ಲಿ ಅಂದರೆ ಅವರ ೧೭ನೆಯ ವಯಸ್ಸಿನಲ್ಲಿ ಪ್ರಕಟವಾಯಿತು. ಆನಂತರ ‘ಶ್ರೀಮಂತೋದ್ಯಾನ ವರ್ಣನಂ’ ಎಂಬ ಚಂಪೂಕಾವ್ಯವನ್ನೂ ರಚಿಸಿದರು. ಇವರು ಬರೆದ ಮೊದಲ ನಾಟಕ ಸುಗುಣ ಗಂಭೀರ ನಾಟಕಕ್ಕೆ ೧೯೧೯ ನೆಯ ಇಸವಿಯಲ್ಲಿ ಬೆಂಗಳೂರಿನ ಏಡಿಏ ಸಂಸ್ಥೆ ಏರ್ಪಡಿಸಿದ್ದ ಶ್ರೀ ಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಲಭಿಸಿತು. (ಮೊದಲನೆಯ ಬಹುಮಾನ ದೊರೆತಿದ್ದು ಶ್ರೀ ಕೈಲಾಸಂ ಅವರ ನಾಟಕ ಟೊಳ್ಳು ಗಟ್ಟಿ ಗೆ.)
ಸಂಸರ ಬದುಕು ನಿಗೂಢವಾಗಿ ಉಳಿದಿದೆ. ಅವರು ಫಿಜಿ, ಟಿಬೆಟ್, ಅಫಘಾನಿಸ್ತಾನ, ಬಲೂಚಿಸ್ತಾನ, ಬರ್ಮಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳನ್ನು ಸುತ್ತಿ ಬಂದರು. ಅಲ್ಲಿಯ ಅವರ ಚಟುವಟಿಕೆಗಳ ಬಗೆಗೆ ಯಾರಿಗೂ ತಿಳಿದಿಲ್ಲ. ಸ್ವತಃ ಸಂಸರು persecution maniaದಿಂದ ಬಳಲುತ್ತಿದ್ದರು. ತಮ್ಮ ೨೨ನೆಯ ವಯಸ್ಸಿನಲ್ಲಿ ಒಮ್ಮೆ, ಹಾಗು ತಮ್ಮ ೩೭ನೆಯ ವಯಸ್ಸಿನಲ್ಲಿ ಮತ್ತೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾದರು. ಕೊನೆಗೆ ಫೆಬ್ರುವರಿ ೧೪, ೧೯೩೯ರಂದು ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ತಮ್ಮ ಆತ್ಮಹತ್ಯಾ ಪ್ರಯತ್ನದಲ್ಲಿ ಯಶಸ್ವಿಯಾದರು.
ಪರಿವಿಡಿ |
[ಬದಲಾಯಿಸಿ] ಸಂಸರ ಸಾಹಿತ್ಯ ಕೃತಿಗಳು
[ಬದಲಾಯಿಸಿ] ಕಾದಂಬರಿಗಳು
- ಕೌಶಲ
- Sherlock Homes in jail
[ಬದಲಾಯಿಸಿ] ಕಾವ್ಯ
- ಶ್ರೀಮಂತೋದ್ಯಾನವರ್ಣನಂ
- ಸಂಸ ಪದಮ್
- ಈಶಪ್ರಕೋಪನ
- ನರಕದುರ್ಯೋಧನೀಯಮ್
- ಅಚ್ಚುಂಬ ಶತಕ
[ಬದಲಾಯಿಸಿ] ನಾಟಕಗಳು
- ಸುಗುಣ ಗಂಭೀರ
- ಮಹಾಪ್ರಭು
- ದೃಷ್ಟಿದಾನ
- ಶರಣಾಗತ ಪರಿಪಾಲಕ
- ರತ್ನಸಿಂಹಾಸನಾರೋಹಣ
- ಮುತ್ತಿನ ಮೂಗುತಿ
- ರಾಜವಿಭವೋತ್ಸವ
- ತೆರಕಣಾಂಬಿ
- ಅಮಂಗಳಾವಾಪ
- ಬೊಕ್ಕಳಿಕ
- ಬೆಟ್ಟದ ಅರಸು
- ಜಗಜಟ್ಟಿ
- ವಿಗಡ ವಿಕ್ರಮರಾಯ
- ಚಲಗಾರ ಚನ್ನಯ್ಯ
- ವಿಜಯನಾರಸಿಂಹ
- ಮುಸ್ತಾಫ ವಿಜಯ
- ತುಂಗ ನಿರ್ಯಾತನ
- ನಂಜುಂಡ ನರಿ
- ಶಪಥಮಂಗಳ
- ಹಂಗಳ
- ಸಂಚಿಯ ಹೊನ್ನಿ
- ಬಿರುದೆಂತಂಬರ ಗಂಡ
- ಮಂತ್ರಶಕ್ತಿ
- Lali and Mammal