ಎಂ.ಆರ್.ಕಮಲ
From Wikipedia
ಎಂ.ಆರ್.ಕಮಲಾ ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮೇಟಿಕುರ್ಕೆಯಲ್ಲಿ ೧೯೫೯ರಲ್ಲಿ ಜನಿಸಿದರು.ಬೆಂಗಳೂರು ವಿಶ್ವವಿದ್ಯಾಲಯದಿಂದ ಎಮ್.ಏ. ಹಾಗೂ ಎಲ್ಎಲ್.ಬಿ.ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪರೀಕ್ಷೆಯಲ್ಲಿ ’ಪಾಶ್ಚಿಮಾತ್ಯ ಸಾಹಿತ್ಯ’ ಅಧ್ಯಯನಕ್ಕಾಗಿ ’ಬಿ.ಎಮ್.ಶ್ರೀ’ ಸ್ವರ್ಣಪದಕ ಪಡೆದಿದ್ದಾರೆ. ಬೆಂಗಳೂರಿನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಇವರು ಮೈಸೂರು ಸಾಂಪ್ರದಾಯಿಕ ಶೈಲಿಯ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ
[ಬದಲಾಯಿಸಿ] ಕವನ ಸಂಕಲನ
- ಶಕುಂತಳೋಪಾಖ್ಯಾನ
- ಜಾಣೆ ಮತ್ತು ಇತರ ಕವಿತೆಗಳು
[ಬದಲಾಯಿಸಿ] ಅನುವಾದ
- ಕತ್ತಲ ಹೂವಿನ ಹಾಡು
(ನಿಗ್ರೋ ಹಾಗು ಆಫ್ರಿಕನ್ ಮಹಿಳೆಯರ ಒಂದುನೂರಾ ಎರಡು ಕವನಗಳ ಸಂಪಾದನೆ ಹಾಗು ಅನುವಾದ)
[ಬದಲಾಯಿಸಿ] ಪ್ರಶಸ್ತಿ
- "ಶಕುಂತಳೋಪಾಖ್ಯಾನ" ಕವನಸಂಕಲನಕ್ಕೆ ೧೯೮೮ರ ಸಾಲಿನಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘ ನೀಡುವ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ.
- "ಜಾಣೆ ಮತ್ತು ಇತರ ಕವಿತೆಗಳು" ಕವನ ಸಂಕಲನಕ್ಕೆ ೧೯೯೨ನೆಯ ಸಾಲಿನ ಮುದ್ದಣ ಪ್ರಶಸ್ತಿ ದೊರಕಿದೆ.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು