ಶಂ.ಗು.ಬಿರಾದಾರ
From Wikipedia
ಮಕ್ಕಳ ಸಾಹಿತಿ ಎಂದು ಖ್ಯಾತರಾದ ಶಂಕರಗೌಡ ಗುರುಗೌಡ ಬಿರಾದಾರ ಇವರು ೧೯೨೬ ಮೇ ೧೭ರಂದು ವಿಜಾಪುರ ಜಿಲ್ಲೆಯ ಓಬಲೇಶ್ವರದಲ್ಲಿ ಜನಿಸಿದರು. ಶಿಕ್ಷಕರಾಗಿ ಇವರು ಸಲ್ಲಿಸಿದ ಸೇವೆಗೆ ರಾಜ್ಯ ಪ್ರಶಸ್ತಿ ಹಾಗು ರಾಷ್ಟ್ರಪ್ರಶಸ್ತಿ ಇವರಿಗೆ ಲಭಿಸಿವೆ.
ಕಥೆ, ಕವನ, ಕಾದಂಬರಿ,ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ಹಾಗು ಸಂಪಾದನೆಗೆ ಸಂಬಂಧಿಸಿದಂತೆ ೧೭ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ರುದ್ರವೀಣೆ, ನೌಕರಿಯ ಹುಚ್ಚು, ಗಿಡ್ಡ ಹೆಂಡತಿ ಲೇಸು, ಕಾರಂಜಿ, ನನ್ನ ಹಾಡು ಕೃತಿಗಳಿಗೆ ಬಹುಮಾನ ಸಂದಿವೆ.