ಅನಸೂಯಾ ಸಿದ್ದರಾಮ ಕೆ.

From Wikipedia

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ ಅನಸೂಯಾ ಸಿದ್ಧರಾಮ ಅವರು ಕನ್ನಡದ ಹೆಸರಾಂತ ಲೇಖಕಿ. ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.

ಇವರು ಗಂಭೀರ ಹಾಗು ವಿನೋದ ಈ ಎರಡೂ ಬಗೆಯ ಬರವಣಿಗೆಯಲ್ಲಿ ಇವರು ಸಿದ್ಧಹಸ್ತರು.

ಇವರ ಅಗಣಿತ ಲೇಖನಗಳು ತರಂಗ, ತುಷಾರ,ಕರ್ಮವೀರ ಮುಂತಾದ ಕನ್ನಡದ ವಾರ ಮತ್ತು ಮಾಸಿಕ ಪತ್ರಿಕೆಗಳಲ್ಲಿ ಪ್ರಕತಟಗೊಂಡಿವೆ.

ಇವರು ಹೊರತಂದ ಕೃತಿಗಳು ಈ ಕೆಳಗಿನಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ವಿನೋದ

  • ಸ್ವಪ್ನಲೋಕದ ಸ್ವಾರಸ್ಯಗಳು
  • ಸುಂದ್ರಿ

[ಬದಲಾಯಿಸಿ] ಕಥಾಸಂಕಲನ

  • ತಾನು ಎಂಬ ತೊಡಕು

[ಬದಲಾಯಿಸಿ] ಪುರಸ್ಕಾರ

  • " ತಾನು ಎಂಬ ತೊಡಕು" ಕಥಾಸಂಕಲನಕ್ಕೆ ಈ ಪ್ರಶಸ್ತಿಗಳು ದೊರೆತಿವೆ:

• ಹುನಗುಂದ ತಾಲೂಕಿನ ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ • ಬೆಳಗಾವಿ ಜಿಲ್ಲೆಯ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪ್ರಶಸ್ತಿ • ಕನ್ನಡ ಲೇಖಕಿಯರ ಪರಿಷತ್ತಿನ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ