ಚಿತ್ರ:Ashta vinayak.jpg
From Wikipedia

No higher resolution available.
Ashta_vinayak.jpg (497 × 357 pixel, file size: ೭೫ KB, MIME type: image/jpeg)
ಮಹಾರಾಷ್ಟ್ರದ ಅಷ್ಟವಿನಾಯಕ ಕ್ಷೇತ್ರಗಳು :
೧. ಮೋರೆಗಾಂವ್ ನ ಮಯೂರೇಶ್ವರ್ [ತಾಲೂಕ, ಪುರಂದರ್, ಪುಣೆ. ಡಿ.]
ಬಾರಾಮತಿ ತಾಲ್ಲೂಕಿನ ಕೃಷ್ಣಾ ನದಿಯ ದಂಡೆಯಮೇಲೆ ಕಟ್ಟಿರುವ ಈ ದೇವಾಲಯ, ಈ ಸ್ಥಳದ ಆಕಾರ, ನವಿಲಿನಂತೆ ಇರುವುದರಿಂದ ಮೋರೆಗಾಂವ್, ಹೆಸರು ಬಂದಿದೆ.
೨. ಶ್ರೀ ಚಿಂತಮಣಿ, ತೇವೂರ್, ತಲೂಕ ಹವೇಲಿ, ಪುಣೆ. ಡಿ.]ತನ್ನ ಚಂಚಲ ಮನಸ್ಸನ್ನು ಪ್ರಶಾಂತಗೊಳಿಸಲೋಸ್ಕರ ಬ್ರಹ್ಮದೇವರು, ಇಲ್ಲಿ ತಪಸ್ಸನ್ನು ಮಾಡಿದರಂತೆ. ಚಿಂತೆಗಳು ಮಾಯವಾದದ್ದರಿಂದ, ಮೂರ್ತಿಗೆ ಚಿಂತಾಮಣಿ ಎಂಬ ಹೆಸರು ಬಂತು. ಈ ಜಾಗವು ತೇವೂರ್ ಕುದುರೆ ಲಾಯಗಳ ಪ್ರದೇಶವೆನ್ನುತ್ತಾರೆ.
೩. ಶ್ರೀ ಸಿದ್ಧಿವಿನಾಯಕ್, ಸಿದ್ಧಟೇಕ್, ತಾಲುಕಾ ಕರ್ಜತ್, ನಗರ್ ಡಿ]
ವಿಷ್ಣುದೇವರು ಇಲ್ಲಿನ ಸಿದ್ಧಟೇಕ್ ಬೆಟ್ಟದ ಮೇಲೆ ತಪಸ್ಸನ್ನು ಆಚರಿಸಿದರಂತೆ. ಇದು ಭೀಮಾ ನದಿಯ ದಂಡೆಯಮೇಲಿದೆ. ಮಹಾವಿಷ್ಣುವಿಗೆ ಮಧು ಮತ್ತು ಕೈಟಭರೆಂಬ ದೈತ್ಯರನ್ನು ಸಂಹರಿಸಲು ಸಹಾಯವಾಯಿತು. ಗಣಪತಿಯ ಸಿದ್ಧಿಯಿಂದ ವಿಷ್ಣುವಿಗಾದ ವಿಜಯಕಾರ್ಯಕ್ಕೋಸ್ಕರವಾಗಿ ಈ ಕ್ಷೇತ್ರವನ್ನು ಸಿದ್ಧಿವಿನಾಯಕ್, ಎನ್ನುತ್ತಾರೆ.
'೪. ಶ್ರೀ ಮಹಾಗಣ್ಪತಿ, ತಾಲ್ಲುಕಾ, ಶಿರೂರ್. ಪುಣೆ. ಡಿ.]
ಮಹಾಗಣಪತಿಯ ಆರಾಧನೆಮಾಡಿ, ಶಿವನು, ವರಪಡೆದನು. ಇಲ್ಲಿನ ಗಣಪತಿಗೆ, ೮, ೧೦, ಅಥವಾ ೧೨ ಕೈಗಳಿವೆ. ತ್ರಿಪುರಾಸುರನ ವಧೆಮಾಡಿದ್ದು ಗಣಪತಿಯ ಅನುಗ್ರಹವಾದಮೇಲೆ. ಶಿವಶಂಕರನಿಗೆ, ತ್ರಿಪುರಾರಿ ಎಂಬ ಹೆಸರು ಬಂತು.
೫. ಶ್ರೀ ವಿಘ್ನೇಶ್ವರ್, ಓಜಾರ್, ತಾಲ್ಲೂಕ, ಜುನ್ನಾರ್, ಪುಣೆ. ಡಿ]
ಕುಕಡಿ ನದಿಯ ದಡದ ಮೇಲೆ ಸ್ಥಾಪಿತವಾಗಿದೆ. ಇಲ್ಲಿನ ದೇವಸ್ಥಾನದ ಮೇಲೆ ಬಂಗಾರದ ಗೋಪುರ ಮತ್ತು ಕಲಶಗಳಿವೆ.
೬. ಶ್ರೀ ಗಿರ್ಜಾತ್ಮಕ, ಲೆನ್ಯಾದ್ರಿ, ತಾ. ಜುನ್ನಾರ್, ಪುಣೆ. ಡಿ]
ಇಲ್ಲಿ ಪಾರ್ವತಿ ತನ್ನ ಕಠಿಣ ತಪಸ್ಸಿನ ಫಲದಿಂದ ಗಣ್ಪತಿಯನ್ನು ಪುತ್ರನನ್ನಾಗಿ ಪಡೆಯುತ್ತಾಳೆ. ಇಲ್ಲಿನ ದೇವಾಲಯ ಬೌದ್ಧವಿಹಾರಗಳ ಸಮೀಪದಲ್ಲಿದ್ದು ಪರ್ವತದ ಅತ್ಯಂತ ಎತ್ತರದಲ್ಲಿ ಕಟ್ಟಲಾಗಿದೆ.
೭. ಬಲ್ಲಾಳೇಶ್ವರ್, ಪಾಲಿ, ತಾಲ್ಲುಕಾ, ಸಿಂಧುಗಡ್, ರಾಯ್ಗಢ್, ಡಿ]
ಬಲ್ಲಾಳನೆಂಬ ಭಕ್ತನು ಕಲ್ಲಿನಲ್ಲಿ ಗಣಪತಿಯನ್ನು ಕೆತ್ತಿ ಪೂಜಿಸಿದಾಗ, ಗಣಪತಿಯು ಸುಪ್ರೀತನಾಗಿ ಅವನ ಬಳಿಯಲ್ಲಿಯೆ ವಾಸಮಾಡಿದರು. ಬ್ರಾಹ್ಮಣನ ವಟುವಿನ ರೂಪದಲ್ಲಿ ಬಂದು ದರ್ಶನ ಕೊಟ್ಟನು.
೮. ಶ್ರೀ ವರದ್ ವಿನಾಯಕ್, ಮಹಾದ್, ತಾಲ್ಲೂಕಾ, ಖಲಪುರ್, ರಾಯಘಡ್. ಡಿ]
ಇಲ್ಲಿನ ವಿಶೇಷವೆಂದರೆ, ಸುಮಾರು ೧೦೭ ವರ್ಷಗಳಿಂದ ಒಂದು ನಂದಾದೀಪ ಸತತವಾಗಿ ಉರಿಯುತ್ತಿದೆ.
ಮೇಲೆ ತಿಳಿಸಿದ ೮ ಕ್ಷೇತ್ರಗಳೂ ಮಹಾರಾಷ್ಟ್ರದಲ್ಲೇ ಇವೆ. ಕೆಲವು, ಪುರಾತನ ದೇವಾಲಯಗಳು. ಉಳಿದವುಗಳನ್ನು ಮಾಧವರಾವ್ ಪೇಷ್ವೆಯವರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿ ಪುನರ್ನಿಮಿಸಲಾಗಿದೆ. ಅಷ್ಟವಿನಾಯಕನ ಪ್ರತಿಮೆಗಳು ಸ್ವಯಂಭು. ಅಷ್ಟವಿನಾಯಕನ ದರ್ಶನಮಾಡಲು ಒಂದು ವಿಧಿವತ್ತಾಗಿ ಹೋಗಬೇಕು. ಇದನ್ನು ಪುರಾಣದಲ್ಲಿ ನಿರೂಪಿಸಲಾಗಿದೆ. ಶ್ಲೋಕದಲ್ಲಿ ಹೇಳಿರುವಂತೆ, ಮೋರೆಗಾಂವ್, ತೇವೂರ್, ಸಿದ್ಧಟೇಕ್, ರಾಜನ್ಗಾಂವ್, ಲೆನ್ಯಾದ್ರಿ, ಓಜಾರ್, ಪಾಲಿ, ಮತ್ತು ಮಹಾಡ್ ಕೊನೆಯಲ್ಲಿ ಬರುತ್ತವೆ.
- ವಿಭಾಗ :ಭಾರತದ ಪುಣ್ಯಸ್ಥಳಗಳು
- ವಿಭಾಗ :ಭಾರತದ ಪ್ರಮುಖ ಸ್ಥಳಗಳು
File history
Click on a date/time to view the file as it appeared at that time.
Date/Time | User | Dimensions | File size | Comment | |
---|---|---|---|---|---|
(current) | ೦೨:೦೮, ೧೯ September ೨೦೦೭ | Radhatanaya (Talk | ಕಾಣಿಕೆಗಳು) | 497×357 | ೭೫ KB | ಸಿದ್ಧಿವಿನಾಯಕನ ಚಿತ್ರ |
- Edit this file using an external application
See the setup instructions for more information.
Links
There are no pages that link to this file.